ತಿರುಪತಿ : ಚೆನ್ನೈನ 76 ವರ್ಷದ ಮಹಿಳಾ ಭಕ್ತೆಯೊಬ್ಬರು ತಿರುಪತಿ ವೆಂಕಟೇಶ್ವರನ ಬೆಟ್ಟದ ದೇವಾಲಯಕ್ಕೆ ಮರಣೋತ್ತರವಾಗಿ 9.2 ಕೋಟಿ ರೂ. ದಾನ ನೀಡಿದ್ದಾರೆ.
ನಿಧನರಾದ ಸ್ಪಿನ್ಸ್ಟರ್ ಪಾರ್ವತಮ್ಮ ಅವರ ಪರವಾಗಿ, ಅವರ ಸಹೋದರಿ ಇಂದು ಬೆಳಿಗ್ಗೆ ತಿರುಪತಿ ದೇವಸ್ಥಾನದಲ್ಲಿ ಟಿಟಿಡಿ ಮಂಡಳಿಯ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ 3.2 ಕೋಟಿ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ನೊಂದಿಗೆ ರೂ.6 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು ಎಂದು ದೇವಸ್ಥಾನದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ದೇಗುಲದ ಆಡಳಿತ ನಡೆಸುವ ತಿರುಮಲ ತಿರುಪತಿ ದೇವಸ್ಥಾನಗಳು (TTD) ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರೂ.3.2 ಕೋಟಿ ನಗದು ಕೊಡುಗೆಯನ್ನು ಬಳಸಿಕೊಳ್ಳುವಂತೆ ಅವರು ಟಿಟಿಡಿಗೆ ಮನವಿ ಮಾಡಿದರು.