News Karnataka Kannada
Sunday, April 28 2024
ದೇಶ

15 ವರ್ಷದಲ್ಲಿ 41.5 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ ವರದಿ

us
Photo Credit : News Kannada

ಕೇವಲ ಹದಿನೈದು ವರ್ಷದಲ್ಲಿ ಸುಮಾರು 41.5 ಕೋಟಿ ಭಾರತೀಯರು ಕಡು ಬಡತನದಿಂದ  ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಅತಿ ದೊಡ್ಡ ಸಾಧನೆ ಇದು ಬಣ್ಣಿಸಿದೆ.

2005-2006 ರಿಂದ ಹಿಡಿದು 2019-2021ರ ನಡುವೆ ಬಹು ಆಯಾಮಗಳ ಬಡತನದಿಂದ (ಮನೆ, ವಿದ್ಯುತ್‌, ಶಿಕ್ಷಣ, ನೈರ್ಮಲ್ಯ, ಪೌಷ್ಠಿಕ ಆಹಾರ ಇತ್ಯಾದಿಗಳಿಂದ ವಂಚಿತರಾದವರು) ಹೊರಬಂದವರ ಸಂಖ್ಯೆಯನ್ನು ವರದಿ ಮಾಡಿದೆ. ಭಾರತ ಸೇರಿದಂತೆ 25 ದೇಶಗಳು 15 ವರ್ಷಗಳಲ್ಲಿ ಕಡು ಬಡತನದ ಪ್ರಮಾಣವನ್ನು ಅರ್ಧಕ್ಕೆ ಇಳಿಸಿವೆ ಎಂದು ವರದಿ ಹೇಳಿದೆ.

ಯುನಿಟೈಡೆಡ್‌ ನೇಷನ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ , ಆಕ್ಸ್‌ಫರ್ಡ್ ಪಾವರ್ಟಿ ಆಯಂಡ್‌ ಹ್ಯೂಮನ್ ಡೆವಲಪ್‌ಮೆಂಟ್‌ ಇನಿಷೇಟಿವ್‌ ಸಂಸ್ಥೆಗಳು ಬಿಡುಗಡೆ ಮಾಡಿರುವ ‘ಗ್ಲೋಬಲ್‌ ಮಲ್ಟಿಡೈಮೆನ್ಷನಲ್‌ ಪಾವರ್ಟಿ’ ಸೂಚ್ಯಂಕದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ‘ಭಾರತದಲ್ಲಿ ಕಡು ಬಡತನ ಪ್ರಮಾಣ ಕಡಿಮೆಯಾಗಿದೆ. ಕೇವಲ15 ವರ್ಷದಲ್ಲಿ ಸುಮಾರು 41.5 ಕೋಟಿ ಜನರು ಕಡು ಬಡತನದಿಂದ ಹೊರಬಂದಿದ್ದಾರೆ. 2005-2006ರಲ್ಲಿ ಶೇಕಡ 55.1ರಷ್ಟು,  2015-2016ರಲ್ಲಿ ಸರಿ ಸುಮಾರು 37 ಕೋಟಿ ಜನರು ಮತ್ತು 2019-2021ರಲ್ಲಿ ಶೇ. 16ರಷ್ಟು ಜನರು ಕಡು ಬಡತನದ ಸುಳಿಯಿಂದ ಹೊರಬಂದಿದ್ದಾರೆ’ ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು