ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವದ ಏಳು ಖಂಡಗಳ 115 ದೇಶಗಳ ನೀರನ್ನು ಬಳಸಲಾಗುತ್ತಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ.
ವಸುದೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ಈ ಮಹತ್ ಕಾರ್ಯ ನಡೆಯುತ್ತಿದೆ. ಈಗಾಗಲೇ ಕೆಲವು ದೇಶಗಳಿಂದ ನೀರು ಬಂದು ತಲುಪಿದ್ದು, ಅಲ್ಲಿನ ರಾಯಭಾರಿಗಳ ಸಮ್ಮುಖದಲ್ಲಿ ರಾಜನಾಥ್ ಸಿಂಗ್ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ನೀರನ್ನು ಸ್ವೀಕರಿಸಿದರು.
‘ಈಗಾಗಲೇ ಕೆಲವು ದೇಶಗಳಿಂದ ನೀರು ಬಂದು ತಲುಪಿದೆ. ಬಾಕಿ ಉಳಿದ 77 ರಾಷ್ಟ್ರಗಳ ನೀರನ್ನೂ ಎನ್ಜಿಒ ಸಂಗ್ರಹಿಸುತ್ತದೆಂಬ ವಿಶ್ವಾಸವಿದೆ. ಇದನ್ನು ನಾವು ರಾಮಲಲ್ಲಾನ ಜಲಾಭಿಷೇಕಕ್ಕೂ ಬಳಸಿಕೊಳ್ಳುತ್ತೇವೆ’ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
‘ಅಯೋಧ್ಯೆಯಲ್ಲಿ ಸಪ್ತಸಾಗರ ಎಂಬ ಸ್ಥಳವಿದೆ. ರಾಮನ ಪಟ್ಟಾಭಿಷೇಕದ ಸಮಯದಲ್ಲಿ ಪ್ರಪಂಚದ ಎಲ್ಲ ಸಾಗರಗಳಿಂದ ನೀರು ತರಲಾಗಿತ್ತು’ ಎಂದು ಸಚಿವರು ತಿಳಿಸಿದರು.
ಡೆನ್ಮಾರ್ಕ್, ಫಿಜಿ, ನೈಜೀರಿಯಾ ಸೇರಿದಂತೆ ಹಲವು ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ವೇಳೆ ಉಪಸ್ಥಿತರಿದ್ದರು.