ಲಕ್ನೋ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ತನಿಖಾ ವರದಿ ನೀಡಲು ಎಸ್ ಐಟಿ ತಂಡಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹತ್ತು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿರುವರು.
ಉತ್ತರ ಪ್ರದೇಶ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕೆ ಅವಸ್ತಿ ಅವರು ಕಾಲಾವಕಾಶವನ್ನು ನೀಡಿ ಆದೇಶಿಸಿರುವರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅನುಮತಿ ಮೇರೆಗೆ ಎಸ್ ಐಟಿ ತಂಡಕ್ಕೆ ನೀಡಲಾಗಿರುವ ಸಮಯವನ್ನು ಹತ್ತು ದಿನಗಳ ಕಾಲ ಹೆಚ್ಚಿಸಲಾಗಿದೆ ಎಂದು ಅವಸ್ತಿ ಅವರು ತಿಳಿಸಿದರು.