ನವದೆಹಲಿ: ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೋಮವಾರ ಕಾವೇರಿ ಸ್ಕೀಂ ಕರಡನ್ನು ಸಲ್ಲಿಸಿದೆ.
ಕರಡು ವರದಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠಕ್ಕೆ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಯು.ವಿ. ಸಿಂಗ್ ಅವರು ಸಲ್ಲಿಸಿದರು.
ಕೇಂದ್ರ ಸಲ್ಲಿಸಿರುವ ಕಾವೇರಿ ಸ್ಕೀಂ ಕರಡು ವರದಿ ಫೆ.16ರಂದು ನೀಡಿದ್ದ ತೀರ್ಪಿಗೆ ಸರಿಹೊಂದುತ್ತದೆಯಾ ಎಂದು ಪರಿಶೀಲಿಸಲಾಗುವುದು ಎಂದು ಸುಪ್ರೀಂ ತಿಳಿಸಿದೆ.
ಮೇ 16ರಂದು ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಸುಪ್ರೀಂ ತಿಳಿಸಿದೆ.