ನವದೆಹಲಿ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವಂತಹ ಪಿಎಂ ಕೇರ್ಸ್ ಫಂಡ್ ನ್ನು ಆರ್ ಟಿಐ ಅಡಿಗೆ ತರಬೇಕು ಎನ್ನುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದೆಹಲಿಯ ಹೈಕೋರ್ಟ್ ತಳ್ಳಿ ಹಾಕಿದೆ.
ಈ ವಿಚಾರದಲ್ಲಿ ಈಗಾಗಲೇ ಕರ್ನಾಟಕದಲ್ಲಿ ಒಂದು ಅರ್ಜಿಯು ದಾಖಲಾಗಿದೆ ಮತ್ತು ಇದರ ವಿಚಾರಣೆಯು ಬಾಕಿಯಿದೆ. ಹೀಗಾಗಿ ಇನ್ನೊಂದು ಅರ್ಜಿ ವಿಚಾರಿಸಲು ಸಾಧ್ಯವಿಲ್ಲವೆಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೊರೋನಾ ಆಪತ್ತಿನ ಸಮಯದಲ್ಲಿ ಪ್ರಧಾನ ಮಂತ್ರಿ ಅವರು ಪಿಎಂ ಕೇರ್ಸ್ ಫಂಡ್ ನ್ನು ಆರಂಭಿಸಿ, ಇದಕ್ಕೆ ದಾನಿಗಳು ನೆರವಾಗಲು ಮನವಿ ಮಾಡಿದ್ದರು.