News Karnataka Kannada
Wednesday, May 08 2024
ವಿದೇಶ

ತಾಯ್ನಾಡಿಗೆ ಮರಳಿದ್ದಾರೆ ಉಕ್ರೇನ್‌ನಲ್ಲಿ ಸಿಲುಕಿದ್ದ 2100 ಕ್ಕೂ ಹೆಚ್ಚು ಭಾರತೀಯರು

Call to Air India call centre over hijacking of aircraft
Photo Credit : News Kannada

ಭಾರತೀಯ ನಾಗರಿಕರನ್ನು ರಕ್ಷಿಸಲು ಆರಂಭವಾದ ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್‌ನಲ ನೆರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2135 ಭಾರತೀಯರನ್ನು  ವಾಪಸ್ ಕರೆತರಲಾಗಿದೆ.

ವಿಶೇಷ ನಾಗರಿಕ ವಿಮಾನಗಳಲ್ಲಿ 9 ಹೊಸದಿಲ್ಲಿಗೆ ಬಂದಿಳಿದವು ಮತ್ತು ಎರಡು ಮುಂಬೈ ತಲುಪಿದವು. ಬುಡಾಪೆಸ್ಟ್ ನಿಂದ 6 ವಿಮಾನಗಳು, ಬುಕಾರೆಸ್ಟ್ ನಿಂದ 2, ಜೆರ್‌ಸ್ಜೋವ್ ನಿಂದ 2 ಮತ್ತು ಕೊಸಿಸ್ ನಿಂದ 1 ವಿಮಾನಗಳು ಆಗಮಿಸಿದವು.

ಇದರೊಂದಿಗೆ ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 15,900ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ. 66 ವಿಶೇಷ ನಾಗರಿಕ ವಿಮಾನಗಳ ಮೂಲಕ ಭಾರತೀಯರ ಸಂಖ್ಯೆ 13852ಕ್ಕೆ ಏರಿದೆ. ಇಲ್ಲಿಯವರೆಗೆ ಐಎಎಫ್ 10 ವಿಮಾನಗಳನ್ನು ಹಾರಾಟ ನಡೆಸಿದೆ. ಆಪರೇಶನ್ ಗಂಗಾ ಭಾಗವಾಗಿ 2056 ಪ್ರಯಾಣಿಕರನ್ನು ವಾಪಸ್ ಕರೆತರುವಾಗ, ಉಕ್ರೇನ್‌ಗೆ 26 ಟನ್ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗಿದೆ.

ಇಂದು ಬುಡಾಪೆಸ್ಟ್ (5), ಸುಸೇವಾ (2) ಮತ್ತು ಬುಕಾರೆಸ್ಟ್ (1) ನಿಂದ 8 ವಿಶೇಷ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇವುಗಳಲ್ಲಿ 1500ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು