ರಷ್ಯಾ ಹಾಗೂ ಉಕ್ರೇನ್ ನಡುವಿನ ಮಹಾಕದನ ಮುಂದುವರೆದಿದೆ. ಯುದ್ಧಭೂಮಿ ಉಕ್ರೇನ್ ನೆಲದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸತತ ಪ್ರಯತ್ನಗಳನ್ನು ನಡೆಸುತ್ತಿದೆ.
ʼಆಪರೇಷನ್ ಗಂಗಾʼ ಕಾರ್ಯಾಚರಣೆಯ ಮೂಲಕ ಇಂದು 3726 ಭಾರತೀಯರನ್ನು ಕರೆತರಲಾಗುತ್ತಿದೆ. ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಒಟ್ಟು ೧೯ ವಿಮಾನಗಳು ಉಕ್ರೇನ್ ನತ್ತ ತೆರಳುತ್ತಿದ್ದು, ಇವುಗಳಲ್ಲಿ 8 ವಿಮಾನಗಳು ಬುಚಾರೆಸ್ಟ್ನತ್ತ, 5 ವಿಮಾನಗಳು ಬುಡಾಪೆಸ್ಟ್ನತ್ತ, 2 ವಿಮಾನಗಳು ಸುಸೇವಾದತ್ತ, 1 ವಿಮಾನ ಕೊಸಿಸ್ನತ್ತ ಮತ್ತು 3 ವಿಮಾನಗಳು ಜೆಸ್ಜೋವ್ನತ್ತ ತೆರಳಿ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲಿವೆ ಎಂದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಹಿತಿ ನೀಡಿದ್ದಾರೆ.