ನವದೆಹಲಿ: ದೇಶದ ಹಲವಾರು ರಾಜ್ಯಗಳ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದ್ದು, ಇದರಿಂದಾಗಿ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸಹಿತ ಹಲವಾರು ರಾಜ್ಯಗಳಲ್ಲಿ ಹಣದ ಕೊರತೆಯಿದೆ ಎಂದು ವರದಿಗಳು ಹೇಳಿವೆ. ಸಮಸ್ಯೆಯು ಮುಂದಿನ ಒಂದೆರಡು ದಿನಗಳಲ್ಲಿ ನಿವಾರಣೆಯಾಗುವುದು ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಎಟಿಎಂಗಳಲ್ಲಿ ಎಲ್ಲಿ ಹೋದರೂ ಜನರಿಗೆ ಹಣದ ಕೊರತೆ ಕಂಡುಬಂದಿದೆ. ಕೆಲವು ಕಡೆಗಳಲ್ಲಿ ಹಣಕ್ಕಾಗಿ ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ಇದು ನೋಟು ಅಮಾನ್ಯದ ದಿನಗಳನ್ನು ನೆನಪಿಸುವಂತಿದೆ.
ಕೇಂದ್ರ ಸರ್ಕಾರವು ಎಟಿಎಂಗಳಲ್ಲಿ ಹಣದ ಕೊರತೆ ಉಂಟು ಮಾಡಿ ಜನರನ್ನು ಮತ್ತೆ ನೋಟು ಅಮಾನ್ಯದ ದಿನಗಳತ್ತು ದೂಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.