ನ್ಯೂಯಾರ್ಕ್: ಏರ್ ಇಂಡಿಯಾ ಪೈಲಟ್ ಸಮಯಪ್ರಜ್ಞೆಯಿಂದಾಗಿ ಸುಮಾರು 370 ಮಂದಿ ಪ್ರಯಾಣಿಕರ ಪ್ರಾಣವು ಉಳಿದುಕೊಂಡಿದೆ.
ದೆಹಲಿಯಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಐ-101 ವಿಮಾನ ಸಪ್ಟೆಂಬರ್ 11ರಂದು ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದ ತಾಂತ್ರಿಕ ದೋಷ ಮತ್ತು ಇಂಧನ ಕೊರತೆ ಎದುರಾಗಿತ್ತು. ಇದರೊಂದಿಗೆ ನಿಲ್ದಾಣನ ಸುತ್ತಲು ದಟ್ಟ ಮಂಜು ಕವಿದಿತ್ತು. ಆದರೂ ನ್ಯೂಯಾರ್ಕ್ ನ ಪರ್ಯಾಯ ವಿಮಾಣ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಶ ಮಾಡಿಸುವಲ್ಲಿ ಪೈಲಟ್ ಯಶಸ್ವಿಯಾಗಿ, ಮೆಚ್ಚುಗೆಗೆ ಪಾತ್ರರಾದರು.
ತಾಂತ್ರಿಕ ದೋಷ ಮತ್ತು ಇಂಧನ ಕೊರತೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಏರ್ ಇಂಡಿಯಾದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.