News Karnataka Kannada
Tuesday, May 07 2024
ವಿದೇಶ

‘ಆಪರೇಷನ್ ಗಂಗಾ’ ಮೂಲಕ ಬುಡಾಪೆಸ್ಟ್ ನಿಂದ ಭಾರತಕ್ಕೆ ಬಂತು ಕೊನೆಯ ವಿಮಾನ!

Call to Air India call centre over hijacking of aircraft
Photo Credit : News Kannada

ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಕರೆಯುವ ಭರದಿಂದ ನಡೆಯುತ್ತಿದ್ದು, ‘ಆಪರೇಷನ್ ಗಂಗಾ’ ಮೂಲಕ ಕೇಂದ್ರ ಸರಕಾರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ  ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ದೆಹಲಿಗೆ ವಾಪಸ್ಸಾಗಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಸಚಿವರು, ದೇಶದ ಯುವ ಜನರು, ಇದೀಗ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದೆ. ತಮ್ಮ ಪೋಷಕರು ಮತ್ತು ಕುಟುಂಬಸ್ಥರನ್ನು ಸೇರಬಹುದಾಗಿದೆ ಎಂದು ತಿಳಿಸಿದ್ದಾರೆ.

ಸೋಮವಾರ ದೆಹಲಿಗೆ ಬುಡಾಪೆಸ್ಟ್‌ನ ನಮ್ಮ 6,711 ವಿದ್ಯಾರ್ಥಿಗಳ ಕೊನೆಯ ಬ್ಯಾಚ್‌ನೊಂದಿಗೆ ತಲುಪಿದ್ದು, ಸಂತೋಷವಾಗಿದೆ. ಇನ್ನು ಈ ಯುವಕರು ಮನೆಗೆ ತಲುಪಿದಾಗ ಸಂತೋಷ, ಉತ್ಸಾಹ ಮತ್ತು ಸಮಾಧಾನವಿದೆ ಮತ್ತು ಶೀಘ್ರದಲ್ಲೇ ಅವರ ಪೋಷಕರು ಮತ್ತು ಕುಟುಂಬಗಳೊಂದಿಗೆ ಇರುತ್ತಾರೆ. ನೆರವಾಗಲು ಬೇಕಾದಷ್ಟು ಸೌಕರ್ಯಗಳಿರುವುದಾಗಿ ಅವರು ಹೇಳಿದ್ದಾರೆ.
ಖಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ, ಉಕ್ರೇನ್‌ನ ಉಳಿದ ಪ್ರದೇಶಗಳಿಂದ ಬಹುತೇಕ ಎಲ್ಲ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು