ನವದೆಹಲಿ: ಕೊರೊನಾ ವಿರುದ್ಧದ ಯುದ್ಧದಲ್ಲಿ ಅನೇಕ ಆಟಗಾರರು, ಸೆಲೆಬ್ರಿಟಿಗಳು ತಮ್ಮ ಕೈಯಲ್ಲಾದಷ್ಟು ಸಹಾಯವನ್ನು ಮಾಡಲು ಮುಂದೆ ಬಂದಿದ್ದು, ಈಗಾಗಲೇ ಅನೇಕರು ದೇಣಿಗೆ ನೀಡಿದ್ದಾರೆ. ಅದರಲ್ಲಿಯೂ ಕ್ರಿಕೆಟ್ ಆಟಗಾರರು ವೈಯಕ್ತಿಕ ಮಟ್ಟದಲ್ಲಿ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.
ಇನ್ನು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಮತ್ತು ಜನರು ಸಹ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಹಂಚಿಕೊಂಡ ವಿರಾಟ್, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 3.6 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ.
ಒಟ್ಟು ಏಳು ಕೋಟೆಯನ್ನು ಸಂಗ್ರಹಿಸುವ ಗುರಿಯನ್ನು ಇರಿಸಿಕೊಂಡಿರುವ ಈ ಜೋಡಿಗೆ ಈಗಾಗಲೇ ಅನೇಕರು ದೇಣಿಗೆ ನೀಡಿದ್ದಾರೆ. ಇನ್ನು ಭಾರತೀಯ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಲ್ ಕೂಡ ಅದರಲ್ಲಿ ದೇಣಿಗೆ ನೀಡಲು ನಿರ್ಧರಿಸಿ, 95 ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.
ಆದರೆ, ಚಹಲ್ ಅವರ ದೇಣಿಗೆ ಕಂಡ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕೋಟಿ ಸಂಪಾದಿಸುವವರು ಹೆಚ್ಚಿನ ಹಣವನ್ನು ದಾನ ನೀಡಬೇಕು ಎಂದು ಅಭಿಮಾನಿಗಳು ಹೇಳಿದರು. ಅದೇ ಸಮಯದಲ್ಲಿ ಇನ್ನೂ ಕೆಲವರು, ಚಹಲ್ ಐಪಿಎಲ್ನಲ್ಲಿ ಇದಕ್ಕಿಂತ ಹೆಚ್ಚಾಗಿ ರನ್ ನೀಡುತ್ತಾರೆ ಎಂದು ಕಾಲೆಳೆದರು. ಇನ್ನೂ ಕೆಲವರು 95 ಸಾವಿರ ರೂಪಾಯಿಗಳಿಗೆ, 1 ವೆಂಟಿಲೇಟರ್ ಸಹ ಬರುವುದಿಲ್ಲ ಎಂದಿದ್ದಾರೆ. ಮತ್ತೊಬ್ಬ, ಅವರು ಕೋಟಿ ಸಂಪಾದಿಸುತ್ತಾರೆ ಆದರೆ ಕೇವಲ 95 ಸಾವಿರ ದೇಣಿಗೆ ನೀಡುತ್ತಿದ್ದಾರೆ. ಇದಕ್ಕಿತ ಏನನ್ನೂ ನೀಡದಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ.