ಕಾರ್ಕಳ: ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಳೆದ ಒಂಭತ್ತು ವರ್ಷದ ಸತತ ಭೇಟಿ ನೀಡಿ ದೇವರ ದರ್ಶನ ಪಡೆಯುವರ ಮೂಲಕ ತನ್ನ ಜೀವನದಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯಾಟವು ಬೆಂಗಳೂರಿನ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆ ಪಂದ್ಯಾಟದ ವೀಕ್ಷಕ ವಿತರಣೆ ನೀಡಲು ತನ್ಮೂಲಕ ಹೊಸ ಧ್ವನಿ ಮೂಡಿಬರಲಿದೆ ಎಂಬ ವಿಶ್ವಾಸವನ್ನು ಭಾರತ ತಂಡದ ಮಾಜಿ ಆಟಗಾರ ಹಾಗೂ ಕಾರ್ಕಳ ಮೂಲಕದ ರವಿಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆರ್ವಾಲು ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಬುಧವಾರ ಮಧ್ಯಾಹ್ನ 12ರ ಭೇಟಿ ನೀಡಿ, ಪೂಜಾ ಕೈಂಕರ್ಯ ಮುಗಿಸಿದ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು ಸಂತೃಪ್ತಿ ಜೀವನಕ್ಕೆ ದೇವರ ನಂಬಿಕೆಯೇ ಅಗತ್ಯವಾಗಿದೆ. ವರ್ಷಕ್ಕೊಮ್ಮೆ ಅವಿಭಜಿತ ದಕ್ಷಿಣ ಜಿಲ್ಲೆಯ ಪ್ರಮುಖ ದೇವಳ ದರ್ಶನ ಪಡೆಯುವ ವಾಡಿಕೆ ಇಟ್ಟುಕೊಂಡಿದ್ದೇನೆ. ಮುಂದಿನ ಯಾತ್ರೆಯು ಕೊಲ್ಲೂರು ಶ್ರೀಕ್ಷೇತ್ರ ಭೇಟಿ ನೀಡಿ ರಾತ್ರಿ ಮಣಿಪಾಲದಲ್ಲಿ ಠಿಕಾಣಿಯೂಡಿ ಗುರುವಾರದಂದು ಸುಬ್ರಹ್ಮಣ್ಯ ಶ್ರೀ ಕ್ಷೇತ್ರ ದರ್ಶನ ಪಡೆದು ಅಲ್ಲಿಂದ ಬೆಂಗಳೂರು ಕಡೆಗೆ ತೆರಳುವುದಾಗಿ ಹೇಳಿದರು.
ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹೂಹಾರ ಹಾಕಿ ರವಿಶಾಸ್ತ್ರಿಯನ್ನು ಸ್ವಾಗತಿಸಿ, ವಾದ್ಯಘೋಷಗಳ ಮೂಲಕ ಬರಮಾಡಿಕೊಂಡರು.ಇಷ್ಟಸಿದ್ಧ ನೆರವೇರಿದ ಪ್ರಯುಕ್ತ ಕುಟುಂಬದ ಮೂಲ ನಾಗನಿಗೆ ಪಂಚಾಮೃತ ಅಭಿಷೇಕ, ಶ್ರೀ ಕ್ಷೇತ್ರದ ಪ್ರಧಾನ ಆರಾಧನೆ ಮೂರ್ತಿ ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ದೇವಳದ ಹೊರಾಂಗಣದಲ್ಲಿ ವಿಶೇಷ ಸಹಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಎಲ್ಲರಂತೆ ಸಹಪಂಕ್ತಿಯಲ್ಲಿ ಕುಳಿತು ಅನ್ನ ಪ್ರಸಾದ ಸ್ವೀಕರಿಸಿ ಅಲ್ಲಿಂದ ಉಡುಪಿಯತ್ತ ಪ್ರಯಾಣ ಮುಂದುವರಿಸಿದರು. ಪತ್ರಕರ್ತ ಮಹೋಹರ್ ಪ್ರಸಾದ್, ಯುವರಾಜ್ ನಾಯ್ಕ, ಭೋಜ ಶೆಟ್ಟಿ, ಸತೀಶ್ ಶೆಟ್ಟಿ, ಸುಧಾಕರ ಹೆಗ್ಡೆ, ಸತೀಶ್ ರಾವ್.ಕೆ, ಕೆ.ಅನಂತ ಪಟ್ಟಾಬಿರಾವ್, ಕೆ.ಹರಿಶ್ವಂದ್ರ ರಾವ್, ಪುರೋಹಿತ ಅಶೋಕ್ ಕಾರಂತ,ಅರ್ಚಕ ಪ್ರವೀಣ್ ಭಟ್, ಡಾ.ಸಂತೋಷ್ ಕುಮಾರ್ ಶಾಸ್ತ್ರಿ, ರಾಘವೇಂದ್ರ ಪೆಜತ್ತಾಯ, ಮೊದಲಾದವರು ಉಪಸ್ಥಿತರಿದ್ದರು.