ರಾಮನಗರ: ತಾಲೂಕಿನ ಬಸವನಪುರ ಗೇಟ್ ಬಳಿ ಟಿವಿಎಸ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ತಾತಾ ಮೊಮ್ಮಗ ಮೃತಪಟ್ಟಿರುವ ಘಟನೆ ನಡೆದಿದೆ.
ಕನಕಪುರ ಮೂಲದ ಯಶಸ್ಸ್ (10) ಚಿಕ್ಕಣ್ಣ (55) ಮೃತ ದುರ್ದೈವಿಗಳು.
ರಾಮನಗರದಿಂದ ಬಿಡದಿಯ ಮಗನ ಮನೆಗೆ ಮೊಮ್ಮಗನ ಕರೆದುಕೊಂಡು ಹೋಗುವಾಗ ಟಿಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಿಂದ ತಾತಾ ಕೆಳಗಡೆ ಬಿದಿದ್ದಾರೆ. ಮೊಮ್ಮಗನ ತಲೆ ಮೇಲೆ ಟಿಪರ್ ಲಾರಿಯ ಚಕ್ರ ಹರಿದಿದೆ. ಹೀಗಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನೆದ್ದಾರೆ.
Ad