ವಿಜಯಪುರ: ಅಪ್ಪುಗೌಡ ಎಂದೇ ಜನಪ್ರಿಯರಾಗಿದ್ದ ಸೋಮನಗೌಡ ಪಾಟೀಲ್ ಮನಗೂಳಿ ಮತ್ತೆ ಜೆಡಿಎಸ್ ಸೇರಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಮನಗೂಳಿ ಅವರಿಗೆ ಟಿಕೆಟ್ ಸಿಗಬಹುದು ಎಂಬ ವಾತಾವರಣವಿತ್ತು. ಆದರೆ ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಟಿಕೆಟ್ ನೀಡಿದ ಹೈಕಮಾಂಡ್ ನಿರ್ಧಾರ ವಿರುದ್ಧ ಮನಗೂಳಿ ಅವರಿಗೆ ಆಕ್ರೋಶವಿತ್ತು.
ಮನಗೂಳಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಪರಾಭವಗೊಂಡು ಬಿಜೆಪಿ ಸೇರಿದ್ದರು. ಅವರು ಕಾಂಗ್ರೆಸ್ ನ ಶಿವಾನಂದ ಪಾಟೀಲ್ ವಿರುದ್ಧ ಅಲ್ಪ ಅಂತರದಿಂದ ಸೋತಿದ್ದರಿಂದ, ಬಿಜೆಪಿ ಸೇರಿದ ನಂತರ ಅವರಿಗೆ ಟಿಕೆಟ್ ಸಿಗಬಹುದು ಎಂದು ಊಹಿಸಲಾಗಿತ್ತು.
ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ, ತಮ್ಮ ಹೆಸರು ಹೆಚ್ಚು ಮತಗಳನ್ನು ಗಳಿಸಿತ್ತು. ಆದರೆ ಈಗ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ನನಗೆ ಮೋಸ ಮಾಡಿದೆ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ಮನಗೂಳಿ ಬೆಂಬಲಿಗರಾದ ಮನಗೂಳಿ ಪಟ್ಟಣ ಪಂಚಾಯಿತಿಯ ಸುಮಾರು 12 ಸದಸ್ಯರು ತಮ್ಮ ನಾಯಕನನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.