News Karnataka Kannada
Friday, May 03 2024
ಮೈಸೂರು

ರಾಮನಗರ: ಮತದಾರರಿಗೆ ನೀಡಲು ತಂದಿದ್ದ ಕುಕ್ಕರ್ ವಶ

Cooker brought to give to voters seized
Photo Credit : By Author

ರಾಮನಗರ: ಮತದಾರರಿಗೆ ಹಂಚಿಕೆ ಮಾಡಲು ತಯಾರಿಸಿದ್ದ ಒಟ್ಟು 2471 ಕುಕ್ಕರ್‌ಗಳನ್ನು ತಹಸೀಲ್ದಾರ್ನೇತೃತ್ವದ ಅಧಿಕಾರಿಗಳ ತಂಡ  ತಾಲ್ಲೂಕಿನ ಕರೀಕಲ್‌ದೊಡ್ಡಿ ಗ್ರಾಮದ ಸಮೀಪ ವಶಪಡಿಸಿಕೊಂಡಿದ್ದಾರೆ.

ಬಿಡದಿ ಹೋಬಳಿ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಕರೀಕಲ್‌ ದೊಡ್ಡಿ ಗ್ರಾಮದ ಬಳಿಯಿರುವ ಹೀರಾಪನ್ನಾ ಹೋಮ್ ಅಪ್ಲೆಯನ್ಸ್ ಕಾರ್ಖಾನೆಯ ಮೇಲೆ ರಾಮನಗರ ತಾಲ್ಲೂಕು ತಹಸೀಲ್ದಾರ್ ತೇಜಸ್ವಿನಿ.ಬಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಕುಕ್ಕರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುಕ್ಕರ್ ಪ್ಯಾಂಕಿಂಗ್ ಮಾಡುವ ಕಾಟನ್ ಬಾಕ್ಸ್‌ಗಳ ಮೇಲೆ ವಿಶ್ವಾಸ್ ವೈದ್ಯ ಎಂಬ ರಾಜಕೀಯ ಮುಖಂಡನಭಾವಚಿತ್ರವಿದೆ. ಈ ಕುಕ್ಕರ್‌ಗಳನ್ನು  ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಯಾರಿಸಲಾಗಿತ್ತು ಎಂದು ಹೇಳಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಧ್ಯಾಹ್ನ 3.30 ಗಂಟೆ ವೇಳೆಗೆ ಕಾರ್ಖಾನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, 3 ಲೀಟರ್ ಸಾಮರ್ಥ್ಯದ ಪ್ಯಾಕಿಂಗ್ ಆಗಿರುವ 2209 ಕುಕ್ಕರ್‌ಗಳು ಹಾಗೂ ಪ್ಯಾಕಿಂಗ್   ಮಾಡದಿರುವ 262 ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾಟನ್ ಬಾಕ್ಸ್ ಮೇಲ್ಬಾಗದಲ್ಲಿ “ಸದಾ ನಿಮ್ಮ ಸೇವೆಯಲ್ಲಿ ನಿಮ್ಮ ಮನೆ ಮಗ ವಿಶ್ವಾಸ್ ವೈದ್ಯ” ಎಂದು ಅಭ್ಯರ್ಥಿಯ ಭಾವಚಿತ್ರದ ಸಹಿತ ಪ್ರಿಂಟ್ ಮಾಡಲಾಗಿದೆ. ಕುಕ್ಕರ್‌ಗಳ ಒಟ್ಟು ಮೌಲ್ಯ 18,53,250 ರೂ ಎಂದು ಅಂದಾಜಿಸಲಾಗಿದೆ.

ದಾಳಿಯಲ್ಲಿ ಬಿಡದಿ ಉಪತಹಸೀಲ್ದಾರ್ ಎಂ.ಮಲ್ಲೇಶ್, ರಾಜಸ್ವನಿರೀಕ್ಷಕರಾದ ಶಿವಕುಮಾರ್, ಪ್ರಕಾಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ದಿನೇಶ್‌ಕುಮಾರ್, ಕಂಚುಗಾರನಹಳ್ಳಿ ಪಿಡಿಒ ದೇವರಾಜು ಹಾಗೂ   ಗ್ರಾಮ ಸಹಾಯಕರಾದ ರವಿ, ರಾಮಣ್ಣ ಭಾಗವಹಿಸಿದ್ದರು.   ಈ ಸಂಬಂಧ ವಿಶ್ವಾಸ್ ವೈದ್ಯ, ಪ್ರವೀಣ್‌ಕುಮಾರ್ ಜೈನ್, ಕುನಾಲ್‌ಜೈನ್ ಎಂಬುವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು