ಮೈಸೂರು: ಈ ಹಿಂದೆ ಇದ್ದಂತಹ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸುಮಾರು 1650 ಕಾಯಿಲೆಗಳಿಗೆ ಈ ಯೋಜನೆಯ ಫಲಾನುಭವಿಗಳು ಚಿಕಿತ್ಸೆ ಪಡೆಯಲು ಅವಕಾಶವಿದೆ.
2022-23 ಸಾಲಿಗೆ ಸಹಕಾರಿಗಳು ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣ ಯೋಜನೆಯನ್ನು ಬಳಸಿಕೊಳ್ಳಲು ಅವಕಾಶವಿದ್ದು, ಈ ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಈ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿದ ಆಸ್ಪತ್ರೆಗಳನ್ನೇ ಮುಂದುವರೆಸಲಾಗುತ್ತಿದೆ.
ಮೈಸೂರು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ 04 ಸದಸ್ಯರ ಕುಟುಂಬದ ನಗರ ಪ್ರದೇಶಕ್ಕೆ ರೂ.1000 ಗಳ ವಂತಿಗೆ ಮತ್ತು ಗ್ರಾಮೀಣ, ಸ್ವಸಹಾಯ ಗುಂಪುಗಳಿಗೆ ರೂ.500- ಗಳ ವಂತಿಗೆಯನ್ನು ಪಾವತಿಸುವುದು, ಪ್ರತಿ ಹೆಚ್ಚುವರಿ ಸದಸ್ಯರಿಗೆ ಶೇ.20 ಅಂದರೆ ರೂ.100ಗಳನ್ನು ಪಾವತಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಸಹಕಾರಿಗಳು ಸಂಘಕ್ಕೆ ಭೇಟಿ ನೀಡಿ ತಮ್ಮ ಕುಟುಂಬದ ಸದಸ್ಯರ ಆಧಾರ ಕಾರ್ಡ್, ಪಡಿತರ ಕಾರ್ಡು ಮತ್ತು ಭಾವಚಿತ್ರಗಳನ್ನು ಕಾರ್ಯದರ್ಶಿಗಳಿಗೆ ನೀಡಿ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2521956 ಮತ್ತು 0821-2443321 ನ್ನು ಸಂಪರ್ಕಿಸಿ ಎಂದು ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಆರ್.ವಿಜಯ ಕುಮಾರ್ ಅವರು ತಿಳಿಸಿದ್ದಾರೆ.