ಮೈಸೂರು: ನಗರದ ಜೆಎಸ್ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ರಕ್ತಕೇಂದ್ರ ವಿಭಾಗ, ಪ್ಯಾಥಾಲಜಿ ವಿಭಾಗ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಮತ್ತು ಜೆಎಸ್ಎಸ್ ಕಾಲೇಜ್ಆಫ್ ನರ್ಸಿಂಗ್, ಎನ್ಎನ್ಎಸ್ ಘಟಕ ಇವರ ಸಹಯೋಗದೊಂದಿಗೆ’ವಿಶ್ವ ರಕ್ತದಾನಿಗಳ ದಿನವನ್ನು ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಂಭಾಗಣದಲ್ಲಿ ಆಚರಿಸಲಾಯಿತು.
2022ರ ವಿಶ್ವ ರಕ್ತದಾನಿಗಳ ದಿನವು ರಕ್ತದಾನವು ಒಗ್ಗಟಿನ ಕ್ರಿಯೆಯಾಗಿದೆ ಪ್ರಯತ್ನಕ್ಕೆ ಕೈ ಜೋಡಿಸಿ ಮತ್ತು ಜೀವ ಉಳಿಸಿ ಎಂಬ ದ್ಯೇಯ ವಾಕ್ಯದೊಂದಿಗೆ ಜೆಎಸ್ಎಸ್ ಆಸ್ಪತ್ರೆಯ ರಕ್ತಕೇಂದ್ರ ಅಧಿಕಾರಿ ಡಾ.ಪಲ್ಲವಿ.ಪಿ ಅವರು ಸುರಕ್ಷಿತ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸುಮಾರು 65 ವಾರ್ಡ್ಗಳಿದ್ದು ಪ್ರತಿವಾರ್ಡ್ಗಳಲ್ಲೂ ಜೆಎಸ್ಎಸ್ ಆಸ್ಪತ್ರೆ ಮತ್ತು ಮೈಸೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿ ಇದಕ್ಕೆ ಅಗತ್ಯ ಸಹಾಯ ಮತ್ತು ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಡಾ. (ಕರ್ನಲ್) ಎಂ.ದಯಾನಂದ ಮಾತನಾಡಿ ರಕ್ತದಾನ ಬಹಳ ಮಹತ್ವವಾದದ್ದು ನಾವು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ರಕ್ತದ ಅವಶ್ಯಕತೆ ಇದ್ದಾಗ ಅದನ್ನು ಪಡೆಯಲು ಮತ್ತು ರಕ್ತವನ್ನು ಸಂಗ್ರಹಿಸಲು ಎಷ್ಟು ಕಷ್ಟವಿತ್ತು ಎಂಬುದನ್ನು ತಮ್ಮ ಅನುಭವದ ಮಾತುಗಳಿಂದ ತಿಳಿಸಿದರು.
ಇದೇ ವೇಳೆ ನಿರಂತರವಾಗಿ ಸುಮಾರು 50ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿರುವ ಗಿರೀಶ್ ಮೊದಲಿಯರ್, ಯೋಗಿಶ್ ಮತ್ತು ಫಣಿದತ್ತ ಅವರುಗಳನ್ನು ಸನ್ಮಾನಿಸಲಾಯಿತು.