ಮೈಸೂರು: ಜೀವಧಾರ ಚಾರಿಟಬಲ್ ಟ್ರಸ್ಟ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ “ಮುದ್ದು ಕಂದ” 2021ರ ಪೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
5ರಿಂದ 10 ವರ್ಷದ ಮಕ್ಕಳು ಮುದ್ದು ಕಂದಮ್ಮಗಳು ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಭಾರತದ ಯಾವುದೇ ಪ್ರಾಂತ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಪನ್ನು ಧರಿಸಿರುವ ಪೋಟೋವನ್ನು ಕಳಿಸಬಹುದಾಗಿದ್ದು, ಈ ಸ್ಪರ್ಧೆ ಸಂಸ್ಕೃತಿ ಪದ್ಧತಿಯನ್ನು ಪರಿಚಯಿಸುವ ಸಲುವಾಗಿ ಆಯೋಜಿಸಿರುವುದರಿಂದ ಈ ಬಗ್ಗೆ ಪೋಷಕರು ನಿಗಾವಹಿಸಿ ಮಗುವಿನ (ಮೂರು ಭಂಗಿಯ) ಫೋಟೋಗಳನ್ನು ನವೆಂಬರ್ 15ರ ಒಳಗೆ 9880752727 ಅಥವಾ 984461347 ಈ ಮೊಬೈಲ್ ನಂಬರಿಗೆ ವಾಟ್ಸಪ್ ಮಾಡಬಹುದಾಗಿದೆ.
ಈ ಸಂಬಂಧ ನಡೆದ ಚಾಮುಂಡಿವಿಹಾರ ಬಡಾವಣೆಯಲ್ಲಿರುವ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿಗಳ ನಿಗಮದ ಅಧ್ಯಕ್ಷರಾದ ಆರ್. ರಘು ಕೌಟಿಲ್ಯ ರವರು ಅದರ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸಣ್ಣಪುಟ್ಟ ಮಕ್ಕಳು ವಿಶೇಷ ಪ್ರತಿಭೆಗಳೊಂದಿಗೆ ಭಾಗವಹಿಸುತ್ತಿರುವುದು ನಮ್ಮ ಸಂಸ್ಕೃತಿ ಹಿಂದೂಧರ್ಮದ ಹಿರಿಮೆ ಹೆಚ್ಚಿಸಿದೆ, ಪೋಷಕರು ತಮ್ಮ ಮಕ್ಕಳನ್ನ ದೇಶದ ಭವಿಷ್ಯದ ಆಸ್ತಿಯಾಗಿ ರೂಪಿಸಬೇಕು, ಕಳೆದ ಹತ್ತು ವರ್ಷದ ಹಿಂದೆ ಶಿಕ್ಷಣ ಪಡೆದ ಮಕ್ಕಳು ಹೊರದೇಶಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದರು. ಆದರೆ ಇಂದು ನಮ್ಮ ದೇಶದ ಸಾಂಸ್ಕೃತಿಕತೆಯ ಜವಬ್ದಾರಿಯನ್ನರಿತ ಮಕ್ಕಳು ವಿದೇಶಿಗರಿಗೆ ಕೆಲಸ ಕೊಡಿಸುವ ಮಟ್ಟಕ್ಕೆ ಬೆಳೆದಿದ್ದಾರೆ ಇದರಿಂದ ವಿಶ್ವಮಟ್ಟದಲ್ಲಿ ಭಾರತ ಬೆಳೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಕಣಕಾರ ಡಾ ರಂಗನಾಥ್, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಕೇಬಲ್ ಮಹೇಶ್, ಅಜಯ್ ಶಾಸ್ತ್ರಿ, ವಿಜಯನಗರದ ಯೋಗೇಶ್ ಇನ್ನಿತರರು ಇದ್ದರು.