ತಿ.ನರಸೀಪುರ: ಹಲ್ಲಿನ ಜೋಳದ ಬಿಡಿಸುವ ಯಂತ್ರದ ಟ್ರ್ಯಾಕ್ಟರ್ ವಾಹನ ಮಗುಚಿ ಮೂವರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆರಗ್ಯಾತನಹಳ್ಳಿ ಸಮೀಪದಲ್ಲಿ ನಡೆದಿದೆ.
ತಾಲ್ಲೂಕಿನ ಬೂದಹಳ್ಳಿ ಗ್ರಾಮದ ಲೇ. ಗವಿಸಿದ್ದಯ್ಯ ಅವರ ಮಗ ಮರಿಜೋಗಿ(45), ಮಹದೇವ್ ಎಂಬುವರ ಮಗ ಪ್ರಕಾಶ್ (33) ಹಾಗೂ ನಾಗರಾಜು ಎಂಬುವರ ಮಗ ಸಂತೋಷ್(19) ಮೃತಪಟ್ಟ ದುರ್ದೈವಿಗಳು. ಚಿಟಗಯ್ಯನಕೊಪ್ಪಲು ಗ್ರಾಮದಿಂದ ನೆರಗ್ಯಾತನಹಳ್ಳಿ ಹೋಗುವ ರಸ್ತೆಯಲ್ಲಿ ಹಲ್ಲಿನ ಜೋಳ ಬಿಡಿಸುವ ಟ್ರಾಕ್ಟರ್ ಮಗುಚಿ ಬಿದ್ದಿದೆ. ಪರಿಣಾಮ ಅದರಲ್ಲಿ ಕುಳಿತಿದ್ದ ಈ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಎಸ್ ಪಿ ಆರ್. ಚೇತನ್, ಎ ಎಸ್ ಪಿ ನಂದಿನಿ ಡಿವೈಎಸ್ ಪಿ ಗೋವಿಂದರಾಜು ಹಾಗೂ ಇನ್ ಸ್ಪೆಕ್ಟರ್ ಕೃಷ್ಣಪ್ಪ ಪರಾಧ ವಿಭಾಗದ ಪಿಎಸ್ಐ ಪಚ್ಚೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.