ತಿ.ನರಸೀಪುರ: ಕೆ.ಎಸ್.ಐ.ಸಿ. ಹೊರಗುತ್ತಿಗೆ ನೌಕರ ಆಲಗೂಡು ಶಿವಕುಮಾರ್ ಶಿಲ್ಕ್ ಫ್ಯಾಕ್ಟರಿ ಮುಖ್ಯಸ್ಥರ ಬೇಜವಬ್ದಾರಿತಕ್ಕೆ ಬಲಿಯಾಗಿದ್ದು ನ್ಯಾಯ ಬೇಕೆಂದು ಆತನ ಕುಟುಂಬ ಕೆ.ಎಸ್.ಐ.ಸಿ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ ನೆಡಸಿದರು.
ಪಟ್ಟಣದ ಕೆ.ಎಸ್.ಐ.ಸಿ ಆವರಣಕ್ಕೆ ಶವದೊಂದಿಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಮೃತ ಶಿವಕುಮಾರ್ ಕುಟುಂಬ ಶವವನ್ನು ಶಿಲ್ಕ್ ಫ್ಯಾಕ್ಟರಿ ಮುಂದಿರಿಸಿ ನೊಂದ ಕುಟುಂಬ ನ್ಯಾಯ ಸಿಗುವವರೆಗೂ ಶವ ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಕುಮಾರ್ ಆಲಗೂಡು ಗ್ರಾಮದ ದಲಿತ ವರ್ಗದ ನಾಯಕ ಸಮುದಾಯಕ್ಕೆ ಸೇರಿದ್ದು ಈತ ಕೆ.ಎಸ್.ಐ.ಸಿ ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಿತ್ತದ್ದ ಕಳೆದ ಮೂರು ತಿಂಗಳ ಹಿಂದೆ ಕೆ.ಎಸ್.ಐ.ಸಿ.ಯ ಕಲ್ನಾರ್ ಸೀಟಿನ ಕಟ್ಟಡದ ಮೇಲೆ ಸ್ವಚ್ಚತೆ ಮಾಡಿಸುತ್ತಿದ್ದ ವೇಳೆ ಕಲ್ನಾರು ಸೀಟು ಮುರಿದು ಕೆಳಬಿದ್ದು ಮರ್ಮಾಂಗಕ್ಕೆ ಪೆಟ್ಟು ಮತ್ತು ಮೂಳೆ ಮುರಿತವಾಗಿ ಚಿಕಿತ್ಸೆ ಪಡೆದಿದ್ದ ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಕೆ.ಆರ್.ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ಮೃತ ಪಟ್ಟಿದ್ದಾನೆ ಈ ಬಗ್ಗೆ ಹಿಂದೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾತನಾಡಿದ ಮೃತ ಶಿವಕುಮಾರ್ ಮಗ ಮೋಹನ್ ಕುಮಾರ್ ನಮ್ಮ ತಂದೆ ಶಿವಕುಮಾರ್ ಕೆ.ಎಸ್.ಐ.ಸಿ ಮುಖ್ಯಸ್ಥರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಫ್ಯಾಕ್ಟರಿಯ ಅಧಿಕಾರಿಗಳು ಕಲ್ನಾರು ಸೀಟಿನ ಕಟ್ಟಡದ ಮೇಲೆ ಕೆಲಸ ಮಾಡುವ ವೇಳೆ ಮುಂಜಾಗ್ರತೆ ಕ್ರಮವಹಿಸಿದೆ ಇರುವುದೇ ಈ ಘಟನೆಗೆ ಕಾರಣವಾಗಿದೆ ನಮ್ಮ ತಂದೆಯೇ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು ನಮ್ಮ ತಂದೆಯನ್ನು ಬದಕಿಸಿಕೊಳ್ಳಲು ಮೈಸೂರು ಜೆ.ಎಸ್.ಎಸ್ ಆಸ್ಪತ್ರೆ, ಬೆಂಗಳೂರು ನಿಮಾನ್ಸ್ .ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಹಲವು ಕಡೆ ಚಿಕಿತ್ಸೆಗೆ ಸಾಲ ಮಾಡಿ ಅಲೆದಿದ್ದೇವೆ ಆದರೂ ನಮ್ಮ ತಂದೆ ಉಳಿಯಲಿಲ್ಲ ಈಗ ನಮ್ಮ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದೆ ನಮ್ಮ ನೋವು ಕೇಳುವವರೆ ಇಲ್ಲ ಎಂದು ನೋವು ಮತ್ತು ಹತಾಶೆಯನ್ನು ತೊಡಿಕೊಂಡರು.
ಶಿಲ್ಕ್ ಫ್ಯಾಕ್ಟರಿ ಬಳಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣ ಠಾಣೆ ಪೋಲಿಸ್ ಇನ್ಸ್ ಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ತಿರುಮಲ್ಲೇಶ್ ಮುಂಜಾಗ್ರತಾ ಕ್ರಮ ವಹಿಸಿದ್ದರು.