ಸರಗೂರು: ಹಿಂದುಳಿದ ತಾಲೂಕು ಎಚ್.ಡಿ.ಕೋಟೆ ಕ್ಷೇತ್ರವನ್ನು ಮಾದರಿ ತಾಲೂಕು ಮಾಡಲು ಶಕ್ತಿ ಮೀರಿ ಶ್ರಮಿಸುತ್ತಿರುವುದಾಗಿ ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು.
ತಾಲೂಕಿನ ಚಕ್ಕೂರು, ಕೆ.ಬೆಳ್ತೂರು, ಅಡಹಳ್ಳಿ,ಹುಣಸಹಳ್ಳಿ, ಚಂಗೌಡನಹಳ್ಳಿ, ಬಡಗಲಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಶಾಸಕನಾಗಿ ನಾಲ್ಕೂವರೆ ವರ್ಷ ಪೂರೈಸಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ನಿರುದ್ಯೋಗ ನಿವಾರಣೆ, ಆರೋಗ್ಯ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಮಾದರಿ ತಾಲೂಕು ಮಾಡಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.
ಕೆ.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳಿಗೆ 7.50 ಕೋಟಿ ರೂ. ಅನುದಾನ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಶೇ.90 ರಷ್ಟು ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ತಾಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಅನುದಾನ ತರುತಿದ್ದೇನೆ ಎಂದರು.
ಜಿ.ಪಂ. ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮಗಳಿಗೆ ಹೆಚ್ಚುವರಿಯಾಗಿ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನೀಡಲಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ ಚಿಕ್ಕವೀರನಾಯ್ಕ, ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಅಡಹಳ್ಳಿ ಶೀಲಾಮಹದೇವು, ಉಪಾಧ್ಯಕ್ಷರಾದ ಮಂಜುಳಾ ಅಂಕನಾಯಕ, ಹೂವಿನಕೊಳ ಮಹೇಶ್, ಜಿಪಂ ಮಾಜಿ ಸದಸ್ಯರಾದ ಪಿ.ರವಿ, ಕೆ.ಚಿಕ್ಕವೀರನಾಯಕ, ಕಾಂಗ್ರೆಸ್ ಮುಖಂಡ ಸತೀಶ್ಗೌಡ, ಇಂಜಿನಿಯರ್ಗಳಾದ ಬೋರಯ್ಯ, ಹರೀಶ್, ರಘು, ಮೋಹನಾಶ್ರೀ, ಯೋಗೀಶ್, ಲಕ್ಷ್ಮಿಕಾಂತ, ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್ಕುಮಾರ್, ಸರಗೂರು ರಾಮಪ್ರಸಾದ್, ಸಿಆರ್ಪಿ ಆರ್.ಆಶಾ, ಪಂಚಾಯಿತಿ ಸದಸ್ಯರಾದ ರುದ್ರಯ್ಯ, ರವಿನಂದನ್, ಚಿಕ್ಕಕಾಳನಾಯಕ, ಭರತ್, ಅಡಹಳ್ಳಿ ಮಂಜು, ಪಿಡಿಒ ನಾಗರಾಜು, ಶಶಿ ಪಾಟೀಲ್, ಪರಶಿವ, ಚಲುವ, ಹುಚಯ್ಯ, ಯಶ್ವಂತ್ ಮೊದಲಾದವರು ಇದ್ದರು.