News Karnataka Kannada
Monday, May 06 2024
ಮೈಸೂರು

ಪಿರಿಯಾಪಟ್ಟಣ: ಸೋಲಾರ್ ಬೇಲಿ ಅಳವಡಿಕೆ ಮಾಡದಂತೆ ಮನವಿ

Periyapatna: Request not to install solar fencing
Photo Credit : By Author

ಪಿರಿಯಾಪಟ್ಟಣ: ಗಿರಿ ಜನರಿಗೆ ಸಾಮೂಹಿಕ ಹಕ್ಕು ಪತ್ರ ನೀಡಿರುವ ಜಾಗವನ್ನು ಒಳಗೊಂಡಂತೆ ತಾಲ್ಲೂಕಿನ ಕೊಪ್ಪ ಗ್ರಾಪಂ ವ್ಯಾಪ್ತಿಗೆ ಸೇರಿದ ಲಿಂಗಪುರ, ರಾಣಿ ಗೇಟ್ 16 ಎಕರೆ. (ಗೌಡನಕಟ್ಟೆ) ಸೇರಿದಂತೆ ಹಲವು ಗಿರಿಜನ ಹಾಡಿಗಳ ಅಕ್ಕ ಪಕ್ಕ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿ ಅಳವಡಿಸಲಾಗುತ್ತಿದ್ದು ಇದನ್ನು ನಿಲ್ಲಿಸುವಂತೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮನವಿ ಮಾಡಿದೆ.

ಈ ಕುರಿತಂತೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ ಈರಯ್ಯ, ಸೀಗೂರು ವಿಜಯ್ ಕುಮಾರ್, ಎಚ್ ಡಿ ರಮೇಶ್ ಮಾತನಾಡಿ ಈ ಹಿಂದೆ ಬುಡಕಟ್ಟು ಹಕ್ಕುಗಳ ಮಾನ್ಯತೆ ಕಾಯ್ದೆ 2006 ರ ಅಡಿಯಲ್ಲಿ ಅಧಿನಿಯಮ 3(1)(ಐ) ರಂತೆ ಸಮುದಾಯ ಹಕ್ಕು ಪತ್ರಗಳನ್ನು ಅರಣ್ಯ ಹಕ್ಕು ಸಮಿತಿ ವತಿಯಿಂದ ನೀಡಲಾಗಿದೆ. ಆದರೂ ಹಾಡಿಯ ಗಿರಿಜನರು ಯಾವುದೇ ದೇವಾಲಯಕ್ಕೆ ಮತ್ತು ಶವಸಂಸ್ಕಾರಕ್ಕೆ (ಸ್ಮಶಾನಕ್ಕೆ) ಹೋಗದಂತೆ ಕೆಲವು ಗಿರಿ ಜನರ ಜಾಗಗಳನ್ನು ಒಳಗೊಂಡಂತೆ ಸೋಲಾರ್ ಬೇಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸುತ್ತಿರುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಗಿರಿಜನ ಹಾಡಿಯ ಮುಖಂಡರು ಹುಣಸೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರವರಿಗೆ ಮತ್ತು ಹುಣಸೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ ಆದರೂ ಅದನ್ನು ಲೆಕ್ಕಿಸದೆ ನಾಗರಹೊಳೆ ಹುಲಿ ಸೂಕ್ಷ್ಮ ಅರಣ್ಯ ಪ್ರದೇಶ ದೊಡ್ಡ ಹರವೆ ಭಾಗದಲ್ಲಿ ಅಧಿಕಾರಿಗಳು ಕೆಲಸವನ್ನು ಮುಂದುವರಿಸಿದ್ದಾರೆ ಎಂದು ದೂರಿದ್ದು, ಅರಣ್ಯ ಇಲಾಖೆಯು ಸೋಲಾರ್ ಬೇಲಿಯನ್ನು ಅಳವಡಿಸುವ ಮುಂಚಿತವಾಗಿ ಗ್ರಾಮ ಅರಣ್ಯ ಸಮಿತಿಯ ಸಭೆಯನ್ನು ನಡೆಸಿ ಚರ್ಚಿಸುವ ಮೂಲಕ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡಲು ನಿರ್ಧಾರ ಮಾಡಬೇಕಿತ್ತು. ಆದರೆ ಯಾವುದೇ ಸಭೆ ನಡೆಸದೆ ಜನರಿಗೆ ಮನವರಿಕೆ ಮಾಡದೆ ಏಕಾಏಕಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು