ಪಿರಿಯಾಪಟ್ಟಣ: ತಾಲ್ಲೂಕಿನ ಸುಳುಗೋಡು ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಅಬಕಾರಿ ಇಲಾಖೆ ಜಂಟಿ ಆಯುಕ್ತರಾದ ಡಾ. ವಿಜಯ್ ಕುಮಾರ್, ಉಪ ಆಯುಕ್ತರಾದ ರವಿಶಂಕರ್ ರವರ ಮಾರ್ಗದರ್ಶನದಲ್ಲಿ ಹುಣಸೂರು ಉಪ ವಿಭಾಗದ ಅಧೀಕ್ಷಕರಾದ ವಿಜಯಕುಮಾರ್ ಅವರ ನೇತೃತ್ವ ದಾಳಿ ನಡೆಸಿ ಸುಳಗೋಡು ಗ್ರಾಮದ ರಾಮೇಗೌಡ ರವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದನ್ನು ಪತ್ತೆ ಮಾಡಿ 6 ಅಡಿ ಎತ್ತರ 3 ಅಡಿ ಅಗಲ ಹಾಗೂ ವಿವಿಧ ಎತ್ತರದ ತೆನೆ ಹಾಗೂ ಹೂವುಗಳಿಂದ ಕೂಡಿದ 10 ಗಾಂಜಾ ಗಿಡ ಮತ್ತು ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲು ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಪಿರಿಯಾಪಟ್ಟಣ ವಲಯ ನಿರೀಕ್ಷಕ ಧರ್ಮರಾಜ್, ಉಪನಿರೀಕ್ಷಕರಾದ ಲಕ್ಷ್ಮೀ, ರಘು ಸಿಬ್ಬಂದಿ ಶ್ರೀನಿವಾಸಮೂರ್ತಿ, ಚನ್ನಕೇಶವ, ಭಾಸ್ಕರ್, ಸ್ವಾಮಿಗೌಡ, ಹರೀಶ್, ಮಹಮ್ಮದ್ ಆಸಿಫ್, ಶಮೀಲ್ ಅಹಮದ್ ಬೇಗ್, ಅಜಯ್, ಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭ ಚೌತಿ ಗ್ರಾ.ಪಂ ಉಪಾಧ್ಯಕ್ಷ ಲಕ್ಷ್ಮಣ್ ಪಟೇಲ್, ಪಿಡಿಒ ಮೋಹನ್ ಕುಮಾರ್ ಇದ್ದರು.