News Karnataka Kannada
Monday, April 29 2024
ಮಂಗಳೂರು

ಸೂಳಬೆಟ್ಟು: ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ರಚನೆಗಾಗಿ ಶಿಲಾನ್ಯಾಸ

Sulabettu Milk Producers' Co-operative Society
Photo Credit : By Author

ಬೆಳ್ತಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ರಚನೆಗಾಗಿ ಶಿಲಾನ್ಯಾಸ ಕಾರ್ಯಕ್ರಮ ನ.27 ರಂದು ನಡೆಯಿತು‌.

ಕೆಸರುಕಲ್ಲು ಹಾಗೂ ಹಾಲು ಎರೆಯುವುದರ ಮೂಲಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಹರೀಶ ಪೂಂಜ ಅವರು, ಕಟ್ಟಡ ರಚನೆ ಸಂದರ್ಭ ರೂ.1 ಲಕ್ಷ ದೇಣಿಗೆಯನ್ನು ನೀಡುವುದಾಗಿ ಹಾಗೂ ಕಟ್ಟಡದ ಸುತ್ತ ಇಂಟರ್‌ಲಾಕ್ ಅಳವಡಿಸಿಕೊಡುತ್ತೇನೆಂದು ಆಶ್ವಾಸನೆಯಿತ್ತರು. ಬಳಿಕ ಅವರು ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ‌ ನಿರಂಜನ ಜೋಶಿ ಅವರನ್ನು ಸಮ್ಮಾನಿಸಿದರು.

ಶ್ರೀಗೋಪಾಲಕೃಷ್ಣ ದೇವಸ್ಥಾನದ ಅರ್ಚಕ ಭಾರ್ಗವ ಮರಾಠೆ ಶಿಲಾನ್ಯಾಸದ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.

ಮಂಗಳೂರು ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ.ರಾಮಚಂದ್ರ ಭಟ್, ವಿಸ್ತರಣಾಧಿಕಾರಿ ಸುಚಿತ್ರಾ, ಇಂಜಿನಿಯರ್ ಶ್ರವಣ ಕೆ., ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ, ಸದಸ್ಯ ಪ್ರವೀಣ್, ಅಂಡಿಂಜೆ ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪೂಜಾರಿ ಕುಕ್ಕೇಡಿ, ಸದಸ್ಯ ದಿನೇಶ್ ಮೂಲ್ಯ ಫಂಡಿಜೆ, ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಶಿವಭಟ್, ನಿರ್ದೇಶಕ ಶಶಿಧರ ಎ., ಅಳದಂಗಡಿ ಹಾ.ಉ.ಸ.ಸಂ.ದ ಅಧ್ಯಕ್ಷ ಗಣೇಶ್ ದೇವಾಡಿಗ, ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ಸೂಳಬೆಟ್ಟು, ಸಂಘದ ನಿಕಟಪೂರ್ವ ಅಧ್ಯಕ್ ಹರೀಶ್ ಪೂಜಾರಿ, ಸ.ಕಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಮೋದ್ ಪೂಜಾರಿ, ಸಂಘದ ಉಪಾಧ್ಯಕ್ಷೆ ವನಿತಾ, ಕಾರ್ಯದರ್ಶಿ ಚೈತ್ರಾ, ನಿರ್ದೇಶಕರುಗಳು, ಸಿಬ್ಬಂದಿ ನಾಗವೇಣಿ, ಊರಿನ ಗಣ್ಯರಾದ ಮುರಲೀಧರ ಗೋಖಲೆ, ಪ್ರಭಾಕರ ಆಠವಳೆ, ವೆಂಕಟೇಶ ಗೋಖಲೆ, ಕಾಜು, ಕರುಣಾಕರ ಹೆಗ್ಡೆ, ಫಂಡಿಜೆಯ ಶರಶ್ಚಂದ್ರ ತಾಮನ್ಕರ್, ಗೋಪಾಲ ತಾಮನ್ಕಾರ್, ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು