ನಂಜನಗೂಡು: ಅನಿಲ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಸಾಗಾಣಿಕ ವೆಚ್ಚವೆಂದು ಅಕ್ರಮವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ಸಹ ಕಾರ್ಯದರ್ಶಿ ಎಂ. ರವಿಕುಮಾರ್ ಆರೋಪಿಸಿದರು.
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು ತಾಲೂಕಿನಾದ್ಯಂತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವಾಗ ಸಾಗಾಣಿಕ ವೆಚ್ಚವೆಂದು ಅಕ್ರಮವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದು, ಈ ಬಗ್ಗೆ ನಾವು ಸಾಕಷ್ಟು ಬಾರಿ ಗ್ಯಾಸ್ ಏಜೆನ್ಸಿ ರವರಿಗೆ ಮಾಹಿತಿ ನೀಡಿದ್ದರು ಕೂಡ ಗ್ಯಾಸ್ ವಿತರಿಸುವ ವ್ಯಕ್ತಿಗಳು ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಕಾನೂನಿಗೆ ವಿರುದ್ಧವಾಗಿ ವಸೂಲಿ ಮಾಡುತ್ತಿದ್ದಾರೆ 15 ಕಿಲೋಮೀಟರ್ ವರೆಗೆ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿಗಳು ಆದೇಶವನ್ನು ಮಾಡಿದ್ದರೂ ಆದೇಶವನ್ನು ಗಾಳಿಗೆ ತೂರಿ ಹೆಚ್ಚು ವಸೂಲಿಗೆ ಇಳಿದಿದ್ದಾರೆ ಆದೇಶಕ್ಕೆ ಕ್ಯಾರಿ ಎನ್ನದೆ ದಂಧೆಗೆ ಇಳಿದಿದ್ದಾರೆ.
ತಾಲ್ಲೂಕಿನ ನಂಜುಂಡೇಶ್ವರ ಗ್ಯಾಸ್ ಏಜೆನ್ಸಿ, ಚೌಡೇಶ್ವರಿ ಗ್ಯಾಸ್ ಏಜೆನ್ಸಿ, ವಿಶಾಲ್ ಗ್ಯಾಸ್ ಏಜೆನ್ಸಿ, ಹಾಗೂ ರೇವಣ್ಣ ಸಿದ್ದೇಶ್ವರ ಗ್ಯಾಸ್ ಏಜೆನ್ಸಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ನಾವೇ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಹಾಗೂ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸೋಮು, ವರುಣಾ ಕ್ಷೇತ್ರದ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಪ್ರಕಾಶ್, ಸಹಕಾರ್ಯದರ್ಶಿ ಚಿಕ್ಕಮಹದೇವನಾಯಕ ಭಾಗವಹಿಸಿದರು.