ಮೈಸೂರು: ನಗರದಲ್ಲಿ ಮನೆಗಳಲ್ಲಿ ಮತ್ತು ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಮಹಿಳಾ ಭಕ್ತಾಧಿಗಳಿಗೆ ವರಮಹಾ ಲಕ್ಷ್ಮಿ ಅಷ್ಟೋತ್ತರ ಪುಸ್ತಕ , ಅರಿಶಿನ ಕುಂಕುಮ ಮತ್ತು ಬಳೆಗಳನ್ನು ನೀಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಲಾಯಿತು.
ಈ ವೇಳೆ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕಷ್ಣಮೂರ್ತಿ ರವರು ಮಾತನಾಡಿ ಸರ್ಕಾರ ಮುಜುರಾಯಿ ಸಂಬಂಧಪಟ್ಟಂಥ ದೇವಸ್ಥಾನಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲು ಸಾರ್ವಜನಿಕರಲ್ಲಿ ಇಂತಹ ವಿಭಿನ್ನ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯಕ್ರಮವಾಗಿದೆ.
ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲೇ ಬೇಕಾಗಿದೆ. ವರಮಹಾಲಕ್ಷ್ಮಿ ದೇವಿಯು ಎಲ್ಲ ದಾರಿದ್ರ್ಯ ನೀಗುವ ದೇವರಾಗಿದ್ದು ಎಲ್ಲರ. ಮನಸ್ಸಿನ ಮತ್ತು ಬಡತನದ ದಾರಿದ್ರ್ಯ ನೀಗಲಿ, ಎಲ್ಲರ ಬಾಳಿನಲ್ಲಿ ದೇವಿಯು ಬಂದು ಆಶೀರ್ವದಿಸಲಿ ಎಂದು ಹೇಳಿದರಲ್ಲದೆ, ಇಂತಹ ಧಾರ್ಮಿಕ ಹಬ್ಬಗಳನ್ನು ಸಮಾಜದ ಜೊತೆ ಬೆರೆತು ನಡೆಸಲು ಎಲ್ಲ ಭಕ್ತಾಧಿಗಳು ಮುಂದಾಗಬೇಕು ಎಂದು ಕರೆ ನೀಡಿದರು.