News Karnataka Kannada
Friday, May 17 2024
ಮೈಸೂರು

ಮೈಸೂರು: ಆಸ್ಪತ್ರೆಗಳು ಜನಸ್ನೇಹಿಯಾಗಿರಬೇಕು- ಸಿದ್ದರಾಮಯ್ಯ

Mysuru: Hospitals should be people-friendly: Siddaramaiah
Photo Credit : By Author

ಮೈಸೂರು: ಖಾಸಗಿ ಆಸ್ಪತ್ರೆ ನಡೆಸುವವರು ಜನರ ಬಗ್ಗೆ ಕರುಣೆ ಸಹಾನುಭೂತಿ ಇಟ್ಟುಕೊಂಡು ಜನಸ್ನೆಹಿ ಆಸ್ಪತ್ರೆಯನ್ನಾಗಿ ಮಾಡಿ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರಿನ ಉದಯಗಿರಿ ಬಳಿಯ ರಿಂಗ್‌ರಸ್ತೆ ಬಳಿ ಡಾ.ಕರುಣಾಕರ್ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಡಾ.ಕರುಣಾಕರ್‌ರವರು ಹಳ್ಳಿಯಿಂದ ಬಂದವರು ಬಡವರ ಕಷ್ಟ- ಸುಖ ನೋಡಿರುವಂತಹವರು, ನಾಗರಾಜೇಗೌಡರು ಜನಪರ ಕಾಳಜಿ ಇಟ್ಟುಕೊಂಡಿದ್ದಂತಹ ಸ್ನೇಹಿತರಾಗಿದ್ದರು, ಹಿಂದೆ ಖಾಸಗಿ ಆಸ್ಪತ್ರೆ ನಡೆಸುವುದು ಕಷ್ಟಕರವಾಗಿತ್ತು. ಕೊರೋನಾ ಬಂದ ಮೇಲೆ ಆಸ್ಪತ್ರೆಗಳಿಗೆ ಅನುಕೂಲವಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದರು.

ಹಾಗಂತ ಕಾಯಿಲೆ ಬರಬೇಕು ಅಂತ ಅಲ್ಲ ಸಮಾಜದಲ್ಲಿರುವ ಎಲ್ಲಾ ಜನರಿಗೂ ಜೀವರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ಬರುತ್ತಿವೆ ಆದ್ದರಿಂದ ರೋಗ ಬರದೇ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಚಿಕ್ಕಂದಿನಲ್ಲಿಯೇ ಯೋಗ, ಪ್ರಾಣಯಾಮ, ವ್ಯಾಯಾಮಗಳನ್ನು ಮಾಡಿದರೆ ಅನೆಕ ರೋಗಗಳಿಂದ ದೂರವಿರಬಹುದು ಎಂದರು.

ಸಮಾರಂಭದಲ್ಲಿ ಜೆ.ಎಸ್.ಎಸ್ ಮಠದ ಶ್ರೀ ದೇಶೀಕೇಂದ್ರ ಮಹಾಸ್ವಾಮಿಗಳು, ಮಾಜಿ ಮಂತ್ರಿಗಳಾದ ಹೆಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್‌ಶೇಠ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೆಗೌಡ, ಡಾ. ತಿಮ್ಮಯ್ಯ, ಡಾ. ಕರುಣಾಕರ್, ಗಿರೀಶ್‌ಗೌಡ, ಎಂ.ರಾಮಯ್ಯ, ಲೇಖಾವೆಂಕಟೇಶ್, ಅಮರಾವತಿಚಂದ್ರಶೇಖರ್, ಹರೀಶ್‌ಗೌಡ, ಮಾರ್ಬಳ್ಳಿಕುಮಾರ್, ರಾಜೇಶ್‌ಗೌಡ, ವಕೀಲ ವೆಂಕಟೇಶ್, ಡಾ.ನಾಗೇಶ್, ಡಾ.ಸುಜಾತಕರುಣಾಕರ್, ಡಾ.ಪ್ರಜ್ವಲ್. ಹಂಚ್ಯಾ ಸಣ್ಣಸ್ವಾಮಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು