News Karnataka Kannada
Monday, April 29 2024
ಮೈಸೂರು

ಮೈಸೂರಿನ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನ ಅಪಹರಣ ಸುಖಾಂತ್ಯ!

Teacher arrested for sexually harassing girl in J&K's Srinagar
Photo Credit : Pexels

ಮೈಸೂರು: ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದು, ಆ ಮೂಲಕ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಸುಖಾಂತ್ಯಗೊಂಡಿದ್ದು, ಪೊಲೀಸರು ಹಾಗೂ ಬಾಲಕನ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರಿನ ದೊಡ್ಡಾಸ್ಪತ್ರೆಯೆಂದೇ ಖ್ಯಾತಿ ಪಡೆದಿರುವ ಕೆ.ಆರ್.ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿರುವ ಡಾ.ಗಿರೀಶ್ ಮತ್ತು ಡಾ.ಸುಮಾ ದಂಪತಿ ಪುತ್ರ ಅಭಿಜಿತ್ ನನ್ನು ಗುರುವಾರ ರಾತ್ರಿ ಅಪಹರಿಸಲಾಗಿತ್ತು. ನಗರದ ಶ್ರೀರಾಂಪುರ ಬಡಾವಣೆ ಎರಡನೇ ಹಂತದ ನಿವಾಸಿಯಾದ ಡಾ.ಗಿರೀಶ್ ಅವರ ಮಗ ಅಭಿಜಿತ್ ಮನೆಗೆ ಸಮೀಪದಲ್ಲೇ ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ವೇಳೆ ನೀಲಿ ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು.

ಬಳಿಕ ಪೋಷಕರಿಂದ ಮಾಹಿತಿ ಪಡೆದ ಕುವೆಂಪುನಗರ ಠಾಣೆ ಪೊಲೀಸರು ಕೂಡಲೇ ದೂರು ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ವಿವಿಧ ತಂಡದ ಮೂಲಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದರು.

ಪೊಲೀಸರು ಸುತ್ತುವರೆದಿರುವ ಮಾಹಿತಿ ತಿಳಿದ ಅಪಹರಣಕಾರರು ಬಾಲಕ ಅಭಿಜಿತ್‌ನನ್ನು ನಿರ್ಜನ ಪ್ರದೇಶದಲ್ಲಿ ಇಳಿಸಿ ಪರಾರಿಯಾದರು ಎಂದು ಹೇಳಲಾಗಿದೆ. ಆದರೆ, ಈ ಕುರಿತು ಪೊಲೀಸರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಅಪಹರಣಕಾರರ ಹೆಡೆಮುರಿ ಕಟ್ಟಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ.

ಅಪಹೃತಗೊಂಡ ಬಾಲಕ ಪೋಷಕರ ಬಳಿ ಬಂದ ನಂತರ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆತನ ಹೇಳಿಕೆಯ ಪ್ರಕಾರ ಸೈಕಲ್ ಹೊಡೆಯುತ್ತಿದ್ದ ನನ್ನನ್ನು ನಾಲ್ವರ ತಂಡ ಏಕಾಏಕಿ ಕಾರಿನೊಳಗೆ ಹಾಕಿಕೊಂಡರು. ಆ ಕಾರಿನ ನಂಬರ್ ಕೆಎ೦ 1 ಎಂದು ಗಮನಿಸಿದೆ. ಮಿಕ್ಕ ನಂಬರ್ ತಿಳಿದುಕೊಳ್ಳ ಬೇಕೆನ್ನುವಷ್ಟರಲ್ಲಿ ನನ್ನನ್ನು ಎತ್ತಿ ಕಾರಿನಲ್ಲಿ ಹಾಕಿದರು. ನನ್ನನ್ನು ಹಿಂಬದಿಯ ಸೀಟಿನಲ್ಲಿ ಕೂರಿಸಿದರು. ನಾನು ಹಿಂಬದಿ ಗಾಜಿನ ಮೂಲಕ ಹೊರಗಡೆ ನೋಡಲು ಹೋದಾಗ ಕತ್ತನ್ನು ತಿರುಗಿಸಿದರು. ನಂತರ ಕೆರೆ ಏರಿ ಪಕ್ಕದ ರಸ್ತೆ, ರಿಂಗ್ ರಸ್ತೆ ಮೂಲಕ ಹಳ್ಳಿ ಕಡೆ ಕರೆದುಕೊಂಡು ಹೋದರು. ಮನೆಯಿಂದ ಅಂದಾಜು 20 ಕಿಮೀ ಡಿಸ್ಟೆನ್ಸ್‌ನಲ್ಲಿ ನನ್ನನ್ನು ಸುತ್ತಾಡಿಸಿದರು. ಒಂದು ಕಡೆ ನನ್ನನ್ನು ಕೆಳಗಿಳಿಸಿದರು. ಆಗ ಒಬ್ಬ ಬೀಡಿ ತರಲು ಹೋದ.

ಮತ್ತೊಬ್ಬ ನನಗೆ ಕುಡಿಯಲು ನೀರು, ಬಿಸ್ಕತ್ತು, ಚಾಕಲೇಟ್ ನೀಡಿದರು. ನಾನು ಅದ್ಯಾವುದನ್ನೂ ತಿನ್ನಲಿಲ್ಲ. ನಂತರ ಮತ್ತೆ ಕಾರು ಚಾಲನೆ ಮಾಡಿಕೊಂಡು ಹೊರಟರು. ಅಷ್ಟರ ವೇಳೆಗೆ ಮತ್ತೊಬ್ಬ ಕಾರಿನಲ್ಲಿ ಡೀಸೆಲ್ ಇಲ್ಲ, ಐದು ಕಿಮೀ ಮಾತ್ರ ಹೋಗಬಹುದು ಎನ್ನುತ್ತಿದ್ದ. ಅಷ್ಟರಲ್ಲಿ ಕಾರಿನ ಪಕ್ಕದಲ್ಲಿ ಅವರುಗಳು ಏನೇನೋ ಮಾತನಾಡುತ್ತಿದ್ದರು. ಅದರ ಮಧ್ಯೆ ನನಗೆ ಹೆದರಿಸಿದರು. ನೀನೇದರೂ ಈ ವಿಚಾರವನ್ನು ನಿಮ್ಮ ಅಪ್ಪ ಅಮ್ಮನಿಗೆ ಹೇಳಿದಲ್ಲಿ ನಿನ್ನನ್ನು ಸ್ಕೂಲಿನಿಂದ ಎತ್ತಾಕಿಕೊಂಡು ಹೋಗಿ ಮರ್ಡರ್ ಮಾಡುತ್ತೇವೆ ಎಂದರು ಎಂದು ಮಾಹಿತಿ ನೀಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು