ಮಡಿಕೇರಿ, ಜೂ.24: ಜಿಲ್ಲಾ ಕಾಂಗ್ರೆಸ್ ನ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳಾಗುವವರು ಕಡ್ಡಾಯವಾಗಿ ಪಕ್ಷದ ಸದಸ್ಯತ್ವ ಪಡೆದಿರಬೇಕೆಂದು ಎಐಸಿಸಿ ಕೊಡಗು ವೀಕ್ಷಕ ಮತ್ತು ಚುನಾವಣಾಧಿಕಾರಿ ಬಾಬುರಾಜು ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲೆಯ 544 ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರತಿನಿಧಿಯನ್ನು ನೇಮಕ ಮಾಡುವ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬೂತ್ ಮಟ್ಟದಲ್ಲಿ ಅಧ್ಯಕ್ಷರು ಹಾಗೂ ಪ್ರತಿನಿಧಿಯನ್ನು ಆಯ್ಕೆ ಮಾಡುವ ಕುರಿತು ವಿವರಿಸಿದ ಅವರು, ಕಡ್ಡಾಯವಾಗಿ ಸದಸ್ಯತ್ವ ಪಡೆಯಬೇಕೆಂದರು. ಕೆಪಿಸಿಸಿಗೆ ರೂ.100 ಶುಲ್ಕವನ್ನು ಪಾವತಿಸಿ, ಡಿಸಿಸಿಯ ಅಧಿಕೃತ ರಶೀದಿ ಪಡೆಯುವಂತೆ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಶೇ.80 ರಷ್ಟು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದರು.
ಕೆಪಿಸಿಸಿ ವಕ್ತಾರ ಟಿ.ಪಿ.ರಮೇಶ್, ಬ್ಲಾಕ್ ಅಧ್ಯಕ್ಷರುಗಳಾದ ಕೆ.ಎ.ಇಸ್ಮಾಯಿಲ್, ಹೆಚ್.ಎ.ಹಂಸ, ಬಿ.ಬಿ.ಸತೀಶ್, ಬಿ.ಎಸ್.ಅನಂತಕುಮಾರ್, ರಂಜಿ ಪೂಣಚ್ಚ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ಮುನೀರ್ ಅಹಮ್ಮದ್, ಜನಾರ್ಧನ, ಡಿಸಿಸಿ ಉಪಾಧ್ಯಕ್ಷರಾದ ಫಿಲೋಮಿನಾ, ಸುಜು ತಿಮ್ಮಯ್ಯ, ಅಬ್ದುಲ್ ರೆಹಮಾನ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಡಿಸಿಸಿ ಸದಸ್ಯರುಗಳಾದ ಕೆ.ಎಂ.ವೆಂಕಟೇಶ್, ಪ್ರಕಾಶ್ ಆಚಾರ್ಯ, ಟಿ.ವಿ.ನಾಣಯ್ಯ, ಹೂವಯ್ಯ, ಪ್ರಭುರೈ, ಪುಲಿಯಂಡ ಜಗದೀಶ್, ರವೂಪ್, ರಾಜ್ಯ ಸೇವಾದಳ ಘಟಕದ ಪ್ರಧಾನ ಕಾರ್ಯದರ್ಶಿ ಥೆರೆಸಾ ವಿಕ್ಟೋರ್, ಆರ್.ಪಿ.ಚಂದ್ರಶೇಖರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.