ಮೈಸೂರು: ಮನುಷ್ಯರು ಪರೋಪಕಾರ, ದಾನ, ಧರ್ಮ ಮೊದಲಾದವುಗಳನ್ನು ಹೆಸರಿಗಾಗಿ ಅಥವಾ ಸ್ವಾರ್ಥಕ್ಕಾಗಿ ಮಾಡಬಾರದು. ಹಾಗೆ ಮಾಡಿದರೆ ಅದು ನಿಷ್ಪ್ರಯೋಜಕವಾಗುತ್ತದೆ. ಪ್ರತಿಫಲಾಪೇಕ್ಷೆ ಹಾಗೂ ನಿಸ್ವಾರ್ಥದಿಂದ ಮಾಡುವ ಸೇವೆ ಭಗವಂತನಿಗೆ ಬೇಗ ತಲುಪುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ತಿಳಿಸಿದರು.
ರಾಘವೇಂದ್ರ ನಗರದಲ್ಲಿರುವ ಅಭಯದಾಯಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಅಭಯಾಂಜನೇಯ ದರ್ಶನಾ ಮಂಟಪಂ ಉದ್ಘಾಟನಾ ಸಮಾರಂಭ ದಲ್ಲಿ ಶ್ರೀ ಅಭಯಾಂಜನೇಯ ದರ್ಶನಾ ಮಂಟಪಂ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರಿಗೂ ತಂದೆ, ತಾಯಿ ಜನ್ಮ ನೀಡುತ್ತಾರೆ. ಗುರುವಾದವನು ಅವರಿಗೆ ಸೂಕ್ತ ಜ್ಞಾನ ಹಾಗೂ ಮಾರ್ಗದರ್ಶನ ನೀಡುತ್ತಾನೆ. ಹೀಗಾಗಿ ತಂದೆ–ತಾಯಿಗಳಿಗೆ ನೀಡಿದಷ್ಟೆ ಗೌರವವನ್ನು ಗುರುಗಳಿಗೂ ನೀಡಬೇಕು. ಗುರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಇಳೈಆಳ್ವಾರ್ ಸ್ವಾಮೀಜಿ ಮಾತನಾಡಿ ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳು ಕುಸಿಸುತ್ತಿದೆ ಮಾನವನ್ನು ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಓದುವ ಸಾಮಗ್ರಿಗಳು ಹಾಗೂ ಪೌರಕಾರ್ಮಿಕರಿಗೆ ವಸ್ತ್ರ ವಿತರಣೆ ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು
ಲಯನ್ ವೆಂಕಟೇಶ್, ಮುರುಳಿಧರ್ ಶಾಸ್ತ್ರ, ಡಾ.ಚಕ್ರಪಾಣಿ, , ಸುಚಿಂದ್ರ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಸವಿತಾ ಘಾಟ್, ಪುಟ್ಟಸ್ವಾಮಿ, ಸುರೇಶ್ ಗೋಲ್ಡ್ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು