News Karnataka Kannada
Thursday, May 02 2024
ಶಿವಮೊಗ್ಗ

ಶಿವಮೊಗ್ಗ: ಅಗ್ನಿ ಶಾಮಕ ಇಲಾಖೆಗೆ ಸುಸರ್ಜಿತವಾದ ಉಪಕರಣಗಳು ಒದಗಿಸಲು ಮನವಿ

Shiv
Photo Credit : By Author

ಶಿವಮೊಗ್ಗ: ನಗರದಲ್ಲಿ ನಿನ್ನೆ ಪ್ರತಿಷ್ಟಿತ ಉದ್ಯಮಿಯ ಮನೆಗೆ ಅಗ್ನಿ ಅವಗಡ ಸಂಬವಿಸಿದ್ದು, ಈ ಸಂದರ್ಭದಲ್ಲಿ ಉದ್ಯಮಿ ಒಳಗಿದ್ದು ಅವರನ್ನು ರಕ್ಷಿಸಲು ಅಗ್ನಿ ಶಾಮಕದಳದವರು ಆಗಮಿಸಿದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿಯವರಿಗೆ ಮಾಸ್ಕ್ ನಲ್ಲಿ ಆಕ್ಸಿಜನ್ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಹಾಗೂ ಟೋಪಿಯಲ್ಲಿ ಲೈಟ್ ನ ವ್ಯವಸ್ಥೆ ಇರುವುದಿಲ್ಲ, ಬೆಂಕಿಯನ್ನು ಮೈಗೆ ಹತ್ತದೆ ನಿಯಂತ್ರಿಸುವ ಜಾಕೆಟ್ ಕೂಡ ಇರುವುದಿಲ್ಲ, ನಿನ್ನೆ ನಡೆದಂತಹ ಆವಗಡದಲ್ಲಿ ಮೊದಲನೆ ಅಂತಸ್ತಿನ ಮಹಡಿಗೆ ಹೋಗಲು ಯಾವುದೇ ರೀತಿಯ ಉಪಕರಣಗಳು ಇಲ್ಲದೆ ತೊಂದರೆ ಆಗ್ಗಿದ್ದು, ಶಿವಮೊಗ್ಗ ನಗರದಲ್ಲಿ ಮಲ್ಟಿ ಸ್ಪೆಷಾಲಿಟೆ ಆಸ್ಪತ್ರೆಗಳು ಹಾಗೂ ಅಪಾರ್ಟ್ ಮೆಂಟ್ ಗಳು ಆಗಿದ್ದು, ಹಾಗೂ ಇನ್ನು ಎತ್ತರವಾದ ಕಟ್ಟಡಗಳು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದ್ದು, ಈ ರೀತಿ ಆವಗಡಗಳು ಸಂಬವಿಸಿದ್ದಾಗ ಅಗ್ನಿ ಶಾಮಕ ಸಿಬ್ಬಂದಿಯವರಿಗೆ ತುಂಬಾ ತೊಂದರೆಯಾಗುತ್ತದೆ. ಉದ್ಯಮಿ ಶರತ್ ಭೂಪಾಳ0 ನವರ ಕಾರ್ಖಾನೆಯಲ್ಲಿ ಸುಮಾರು 800 ಜನ ಕೆಲಸಮಾಡುತ್ತಿದ್ದು ಇವರೆಲ್ಲರು ಇಂದು ದುಃಖದಲ್ಲಿದ್ದಾರೆ.

ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಗ್ನಿ ಶಾಮಕ ಇಲಾಖೆಗೆ ಬೇಕಾಗಿರುವಂತಹ ಉಪಕರಣಗಳ ವ್ಯವಸ್ಥೆ ಮಾಡಿಕೊಡಬೇಕಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೇಶ್, ನಾಗರಾಜ್ ಕಂಕರಿ , ಮಂಜುಳಾ ಶಿವಣ್ಣ , ಮಾಜಿ ಉಪ ಮಹಾಪೌರರಾದ ಹೆಚ್. ಪಾಲಾಕ್ಷಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಪಿ ಗಿರೀಶ್ ಪ್ರಮುಖರಾದ ಭಾಸ್ಕರ್ ಪ್ರಶಾಂತ್ ರಾಯ್ , ಮೋಹನ್ ಸೋಮಿನಕೊಪ್ಪ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು