ಮೈಸೂರು: ಬಸವ ಬಳಗ ಚಾಮುಂಡಿಪುರಂ ಸಂಘದ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಚಾಲನೆ ನೀಡಿದರು
ಮೈಸೂರಿನ ಚಾಮುಂಡಿಪುರಂ ನಲ್ಲಿರುವ ಬಸವ ಬಳಗದ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಬಸವೇಶ್ವರ ಜಯಂತಿ,ರಾಮನವಮಿ, ಚಾಮುಂಡೇಶ್ವರಿ ಹಬ್ಬ ಹಾಗೂ ವಿವಿಧ ಹಬ್ಬಗಳ ಆಚರಣೆ ಚಾಮುಂಡಿಪುರಂ ವೃತ್ತದಲ್ಲಿ ಆಚರಿಸುತ್ತಾ ಬಂದಿದ್ದು, ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದ್ದು, ಇತ್ತೀಚಿನ ದಿನಗಳಲ್ಲಿ “ಬಸವ ಬಳಗ ಚಾಮುಂಡಿಪುರಂ” ಹೆಸರಿನಲ್ಲಿ ಸಂಘವನ್ನು ನೋಂದಣಿಯಾಗಿದ್ದು ಇದರ ಸದಸ್ಯತ್ವವನ್ನು ಹೆಚ್ಚಿಸಿ ಇನ್ನಷ್ಟು ಸಾಮಾಜಿಕ ಕೆಲಸಗಳಿಗೆ ಅಣಿಯಾಗುತ್ತಿದೆ.
ನೋಂದಣಿ ಕಾರ್ಯಕ್ಕೆ ಚಾಲನೆ ನೀಡುವ ವೇಳೆ ಬಸವ ಬಳಗ ಚಾಮುಂಡಿಪುರಂ ಸಂಘದ ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ, ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಉಪಾಧ್ಯಕ್ಷರಾದ ಎಂ ಬಸವರಾಜು, ಕಾರ್ಯದರ್ಶಿ ಮಲ್ಲಪ್ಪ ಖಜಾಂಜಿ ವಿ ಬಸವರಾಜು, ನಿರ್ದೇಶಕ ಜಿ ಮಹದೇವಪ್ಪ, ವಿ ಮಂಜುನಾಥ್, ಯೋಗೇಶ್, ನವೀನ್, ಡಿ ಸಿ ಮಂಜುಳಾ, ಕೆ ಎಂ ಸೋಮೇಶ್, ಎನ್ ಧರ್ಮೇಂದ್ರ, ಹಾಗೂ ಸಮಾಜ ಮುಖಂಡರಾದ ಮೋಹನ್, ಶಿವಣ್ಣ, ದೇವೇಂದ್ರ ಸ್ವಾಮಿ, ಚನ್ನಪ್ಪ, ರುದ್ರಸ್ವಾಮಿ, ದೀಪಕ್, ಸಂದೇಶ್, ಪ್ರದೀಪ್, ವಿನಯ್, ಸುರೇಶ್, ಪಾರ್ವತಿ, ಗಾಯತ್ರಿ , ಮಧುರ, ರೇಖಾ, ನಾಗಮ್ಮ, ನಾಗರಾಜ್, ನಾಗೇಂದ್ರ ಸೇರಿದಂತೆ ಇನ್ನಿತರರು ಇದ್ದರು.