ಮೈಸೂರು: ಚಾಮುಂಡಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ 17 ವರ್ಷಗಳಿಂದಲೂ ಕಾರ್ತೀಕ ಮಾಸದ ಮೂರನೇ ಸೋಮವಾರಕ್ಕೂ ಮುನ್ನ ದಿನ ಮಸ್ತಕಾಭಿಷೇಕ ನಡೆಸುತ್ತಾ ಬಂದಿದ್ದು, ಚಾಮುಂಡಿಬೆಟ್ಟದ ದೊಡ್ಡ ನಂದಿ ವಿಗ್ರಹಕ್ಕೆ ಭಾನುವಾರ ಮಸ್ತಕಾಭಿಷೇಕವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅಭಿಷೇಕಕ್ಕೆ ಚಾಲನೆ ನೀಡಿದರೆ, ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರೊಂದಿಗೆ ಅಭಿಷೇಕ ನೆರವೇರಿಸಿದರು.
ಭಾನುವಾರ ಮುಂಜಾನೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪೂರ್ಣಕುಂಭಗಳ ಪ್ರತಿಷ್ಠಾಪನೆ ಮಾಡಲಾಯಿತು.ಬಳಿಕ ಅರಿಶಿಣ,ಕುಂಕುಮ, ಶ್ರೀಗಂಧ, ಜೇನು ತುಪ್ಪ, ಹಾಲು,ಮೊಸರು,ತುಪ್ಪ,ಎಳನೀರುಕಬ್ಬಿನ ರಸ, ನಿಂಬೆ ರಸ, ಜೇನು ತುಪ್ಪ,ದ್ರಾಕ್ಷಿ,ಖರ್ಜೂರ, ಬಿಲ್ವಪತ್ರೆ, ದರ್ಬೆ,ವಿಭೂತಿ, ಹೂವು,ಹಣ್ಣು ಮುಂತಾದ 38 ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಅಂತಿಮವಾಗಿ ಪಚ್ಚ ಕರ್ಪೂರವನ್ನುಒಳಗೊಂಡಸುಗಂಧ ದ್ರವ್ಯ ಪ್ರೋಕ್ಷಣೆ ಮಾಡಿ ಶುದ್ಧ ನೀರಿನಿಂದ ಸ್ವಚ್ಛಗೊಳಿಸಲಾಯಿತು. ವೈವಿಧ್ಯಮಯ ಪುಷ್ಪಗಳಿಂದನಂದಿ ವಿಗ್ರಹವನ್ನು ಅಲಂಕರಿಸಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗೋವಿಂದ, ಚಾಮುಂಡಿ ಬೆಟ್ಟದ ನಂದಿಗೆ ಪ್ರತಿ ಬಾರಿಯಂತೆ ಅಭಿಷೇಕ ಮಾಡಿದ್ದೇವೆ. ನಂದಿಗೆ ಬರುವ ರಸ್ತೆ ಕುಸಿದಿದೆ. ಆದ್ದರಿಂದ ಸರಳವಾಗಿಯೇ ಅಭಿಷೇಕ ಮಾಡಿದ್ದೇವೆ. ಕಾರ್ತಿಕ ಮಾಸದ ಸೋಮವಾರದಂದು ಅಭಿಷೇಕ ಮಾಡಬೇಕಿತ್ತು. ಆದರೆ ಭಾನುವಾರಹೆಚ್ಚಿನಜನರು ಮೆಟ್ಟಿಲು ಮಾರ್ಗವಾಗಿ ಚಾಮುಂಡಿಬೆಟ್ಟಕ್ಕೆ ಬರುತ್ತಾರೆ. ಅವರೆಲ್ಲರಿಗೂ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಭಾನುವಾರ ಅಭಿಷೇಕ ಮಾಡಿದ್ದೇವೆ ಎಂದರು.