News Karnataka Kannada
Thursday, May 02 2024
ಮೈಸೂರು

ಮೈಸೂರು: ಹನಗೋಡಿನಲ್ಲಿ ಕಣ್ಮನತಣಿಸುತ್ತಿರುವ ಲಕ್ಷ್ಮಣ ತೀರ್ಥ

Lakshmana Theertha in Hanagod
Photo Credit : By Author

ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಹರಿಯುತ್ತಿದ್ದು ಹುಣಸೂರು ತಾಲೂಕಿನ ಹನಗೋಡು ಬಳಿಯಲ್ಲಿ ಕಟ್ಟಲಾಗಿರುವ ಅಣೆಕಟ್ಟೆ ಭರ್ತಿಯಾಗಿ ಕಟ್ಟೆಮೇಲಿಂದ ಧುಮ್ಮಿಕ್ಕಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಕೊಡಗಿನಲ್ಲಿ ಹುಟ್ಟಿ ನೂರಾರು ಕಿ.ಮೀ, ದೂರವನ್ನು ತೋಟ, ಗದ್ದೆ, ಅರಣ್ಯದ ನಡುವೆ ಹರಿದು ಕಾವೇರಿ ನದಿಯನ್ನು ಸೇರುವ ಲಕ್ಷ್ಮಣ ತೀರ್ಥ ನದಿ ರೈತರ ಜೀವನಾಡಿಯಾಗಿದೆ. ಇಂತಹ ನದಿಗೆ ಹನಗೋಡು ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲೆಂದು 1961ರಲ್ಲಿ ವಿಶಾಲವಾದ ಅಣೆಕಟ್ಟು ನಿರ್ಮಿಸಿದ್ದು, ಈ ಕಟ್ಟೆ ತುಂಬಿದ ಬಳಿಕ ನೀರು ಹರಿದು ಹೋಗುತ್ತದೆ. ಆದರೆ ಈಗ ಲಕ್ಷ್ಮಣ ತೀರ್ಥ ನದಿ ಭೋರ್ಗರೆದು ಹರಿಯುತ್ತಿರುವುದರಿಂದ ಸುಂದರ ನೋಟ ಲಭ್ಯವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಪರಿಣಾಮ ಹನಗೋಡು ಕಟ್ಟೆ ಭರ್ತಿಯಾಗಿ ನೀರು ಹರಿದುಹೋಗುತ್ತಿದೆ. ಇದೀಗ ಸುತ್ತಲಿನವರು ನೀರು ಧುಮ್ಮಿಕ್ಕುವ ದೃಶ್ಯವನ್ನು ಸವಿಯಲೆಂದೇ ಇಲ್ಲಿಗೆ ಜನ ಬರುತ್ತಿದ್ದಾರೆ. ಒಟ್ಟಾರೆ ಸುಂದರ ದೃಶ್ಯ ಎಲ್ಲರ ಗಮನಸೆಳೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು