News Karnataka Kannada
Sunday, May 12 2024
ಮೈಸೂರು

ಪಿರಿಯಾಪಟ್ಟಣದಲ್ಲಿ ಮಳೆಯಿಂದ ತಂಬಾಕು ಬೆಳೆ ನಾಶ

Tobacco crop destroyed due to rains in Periyapatna
Photo Credit : By Author

ಪಿರಿಯಾಪಟ್ಟಣ: ಮಳೆ ಸುರಿಯುತ್ತಿರುವ ಪರಿಣಾಮ ಕೆರೆಗಳು ಕೋಡಿ ಬಿದ್ದಿದ್ದು, ನೀರು ಪಕ್ಕದ ರೈತರ ಜಮೀನಿಗೆ ನುಗ್ಗುತ್ತಿದೆ ಪರಿಣಾಮ ಬೆಳೆಗಳು ಜಲಾವೃತವಾಗುತ್ತಿದ್ದು, ಒಂದು ವೇಳೆ ಮಳೆ ಮುಂದುವರೆದು ನೀರು ಹಾಗೆಯೇ ಜಮೀನಿನಲ್ಲಿ ನಿಂತಿದ್ದೇ ಆದರೆ ಬೆಳೆಗಳೆಲ್ಲ ಕೊಳೆತು ನಾಶವಾಗಲಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಇದೀಗ ಪಿರಿಯಾಪಟ್ಟಣ ತಾಲೂಕಿನ ಕೆಲವು ಗ್ರಾಮಗಳಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ತಂಬಾಕು ಬೆಳೆದ ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸದ್ಯ ತಾಲೂಕಿನ ಸುಂಡವಾಳು ಗ್ರಾಮದ ವೆಂಕಟರಾಮಯ್ಯ ಅವರ ತಂಬಾಕು ಜಮೀನು ಜಲಾವೃತವಾಗಿ ಬೆಳೆ ನಾಶವಾಗಿದೆ.

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಸತತ ಮಳೆಯಿಂದ ಕಿರನಲ್ಲಿ ಗ್ರಾಮದ ದೊಡ್ಡಕೆರೆ ಭರ್ತಿಯಾಗಿ ಕೋಡಿ ಹರಿದು ಕೆರೆ ಪಕ್ಕದಲ್ಲಿರುವ ವೆಂಕಟರಾಮಯ್ಯ ಅವರ ತಂಬಾಕು ಜಮೀನಿಗೆ ನೀರು ನುಗ್ಗಿದೆ ಪರಿಣಾಮ ಕಟಾವಿನ ಹಂತಕ್ಕೆ ಬಂದಿದ್ದ ತಂಬಾಕು ಬೆಳೆ ನೀರಿನಲ್ಲಿ ಸಿಲುಕಿ ಕೊಳೆಯುತ್ತಿದೆ.

ಕುಟುಂಬದವರೊಡನೆ ಸೇರಿ ರೈತ ವೆಂಕಟರಾಮಯ್ಯ ಅವರು ಕಷ್ಟಪಟ್ಟು ಲಕ್ಷಾಂತರ ರೂ ಖರ್ಚು ಮಾಡಿ ಜಮೀನಿನಲ್ಲಿ ತಂಬಾಕು ಬೆಳೆ ಬೆಳೆದಿದ್ದರು. ಇನ್ನೇನು ಕಟಾವು ಹಂತಕ್ಕೆ ಬಂದಿದೆ ಎಂದು ನೆಮ್ಮದಿಯುಸಿರು ಬಿಡುವ ವೇಳೆಗೆ ಜಮೀನಿಗೆ ನೀರು ನುಗ್ಗಿದ್ದು ಬೆಳೆ ನಾಶವಾಗುವ ಹಂತ ತಲುಪಿದೆ. ಇದರಿಂದ ಅನ್ಯದಾರಿ ಕಾಣದ ರೈತ ತಂಬಾಕು ಮಂಡಳಿ ಹಾಗೂ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು