News Karnataka Kannada
Saturday, May 04 2024
ಮೈಸೂರು

ಹಿಜಾಬ್‌-ಕೇಸರಿ ಶಾಲು ಮನೆ ಹಾಗೂ ಇತರ ಕಡೆ ಪ್ರದರ್ಶಿಸಬಹುದೇ ಹೊರತು, ಶಾಲೆಗಳಲ್ಲಿ ಅಲ್ಲ; ಎಚ್‌.ವಿಶ್ವನಾಥ್‌

H Vishwanath
Photo Credit :

ಮೈಸೂರು : ‘ಶಾಲೆ ಪರಮಪೂಜಿತ ಸ್ಥಳವಾಗಿದ್ದು, ಅಲ್ಲಿ ಧರ್ಮದ ಪ್ರದರ್ಶನಕ್ಕೆ ಅವಕಾಶವಿಲ್ಲ. ಹಿಜಾಬ್‌ ಅಥವಾ ಕೇಸರಿ ಶಾಲು ಮನೆ ಹಾಗೂ ಇತರ ಕಡೆ ಪ್ರದರ್ಶಿಸಬಹುದೇ ಹೊರತು, ಶಾಲೆಗಳಲ್ಲಿ ಅಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ‘ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡು ವಿಜೃಂಭಿಸುತ್ತಿವೆ. ಕೇಸರಿ ಶಾಲು, ಹಿಜಾಬ್‌ಗಿಂತ ಶಿಕ್ಷಣ ದೊಡ್ಡದು. ಧರ್ಮದ ಲಾಂಛನ ಮನೆಗಳಿಗೆ ಸೀಮಿತವಾಗಿರಲಿ. ಅವನ್ನು ಶಾಲೆಯೊಳಗೆ ತರಬೇಡಿ’ ಎಂದು ಸಲಹೆ ನೀಡಿದರು.

‘ಬಸವರಾಜ ಬೊಮ್ಮಾಯಿ ಅವರೇ, ಯಾರೋ ಮೂರು ಜನ ಕಲ್ಲೆಸೆದ ಕಾರಣಕ್ಕೆ ಶಾಲೆ- ಕಾಲೇಜುಗಳನ್ನು ಮೂರು ದಿನ ಮುಚ್ಚಿಸುತ್ತೀರಾ? ಕಲ್ಲು ಹೊಡೆದವರನ್ನು ಒದ್ದು ಒಳಗೆ ಹಾಕಲು ನಮ್ಮಲ್ಲಿ ಕಾನೂನು ಇಲ್ಲವೇ? ಕಾನೂನಿನಡಿ ಶಿಕ್ಷಿಸುವ ಬದಲು ಶಾಲೆಗೆ ಬಾಗಿಲು ಹಾಕುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲವು ಶಾಲೆಗಳ ಆಡಳಿತ ವರ್ಗದವರು ಒಂದೊಂದು ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಿ ಈ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದರೆ, ಅಂತಹ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು