News Karnataka Kannada
Thursday, May 09 2024
ಮೈಸೂರು

ಮಹಿಳೆಗೆ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಪ್ರತಿಭಟನೆ

Strike
Photo Credit : News Kannada

ಮೈಸೂರು : ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ನಿವೇಶನ ಬಿಟ್ಟುಕೊಟ್ಟ ಮಹಿಳೆಗೆ ಆರೇಳು ವರ್ಷಗಳಾದರೂ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಘಟನೆ ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ತಿ.ನರಸೀಪುರದ ಸರ್ವಮಂಗಳಮ್ಮ ಎಂಬುವರು ರಸ್ತೆ ನಿರ್ಮಾಣಕ್ಕೆ ನಿವೇಶನವನ್ನು ಬಿಟ್ಟುಕೊಟ್ಟಿದ್ದು, ಆರೇಳು ವರ್ಷಗಳಾದರೂ ಅವರಿಗೆ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಮತ್ತು ಮಹಿಳೆಗೆ ಬೆಂಬಲ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯಾಲಯದ ಮುಂಭಾಗ ಬುಧವಾರದಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಧರಣಿ ನಿರತರ ಅಹವಾಲು ಆಲಿಸಲು ಸ್ಥಳಕ್ಕಾಗಮಿಸಿದ ಪುರಸಭೆ ಅಧ್ಯಕ್ಷ ಎಸ್. ಮದನ್ ರಾಜು ಹಾಗೂ ಮುಖ್ಯಾಧಿಕಾರಿ ಬಸವರಾಜು ಅವರು ಪ್ರತಿಭಟನಾಕಾರರ ಮನವೊಲಿಕೆಗೆ ಒಪ್ಪದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಖುದ್ದಾಗಿ ಬರುವವರೆಗೂ ಧರಣಿ ಹಿಂಪಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಮಾತನಾಡಿ, ಪಿಎಲ್ ಡಿ ಬ್ಯಾಂಕ್ ರಸ್ತೆ ದಾಸ ನಾಯಕರ ಬೀದಿಯಲ್ಲಿದ್ದ 60×60 ಅಳತೆಯ ಖಾಲಿ ನಿವೇಶನದಲ್ಲಿ ಸರ್ವಮಂಗಳಮ್ಮ ಎಂಬುವರು ರಸ್ತೆ ನಿರ್ಮಾಣಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ 28X60 ಅಳತೆ ನಿವೇಶನವನ್ನು ಬಿಟ್ಟುಕೊಟ್ಟಿದ್ದರೂ ಅವರಿಗಿನ್ನು ಪರಿಹಾರವಾಗಿ ಪರ್ಯಾಯ ನಿವೇಶನ ಕೊಟ್ಟಿಲ್ಲ. ಇಬ್ಬರಿಗೆ ಈಗಾಗಲೇ ಪರ್ಯಾಯ ನಿವೇಶನ ನೀಡಿರುವ ಪುರಸಭೆ ವೃದ್ಧ ಮಹಿಳೆ ಹಾಗೂ ಆಕೆಯ ಮೊಮ್ಮಗನ ಬೇಡಿಕೆಯನ್ನು ಈಡೇರಿಸಲು ಮೀನಾಮೇಶ ಎಣಿಸಲಾಗುತ್ತಿದೆ. ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ಮಹಿಳೆಗೆ ನಿವೇಶನ ನೀಡುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.

ಭಾರತೀಯ ಪರಿವರ್ತನಾ ಸಂಘದ ಜಿಲ್ಲಾಧ್ಯಕ್ಷ ಕೆ. ಎನ್. ಪ್ರಭುಸ್ವಾಮಿ, ದಸಂಸ ವಿಭಾಗೀಯ ಸಂಚಾಲಕ ಮರಿಸ್ವಾಮಿ ಕನ್ನಾ ಯಕನ ಹಳ್ಳಿ, ತಾಲ್ಲೂಕು ಸಂಚಾಲಕ ಮಾದಿಗ ಹಳ್ಳಿ ಮಹೇಶ್, ಸಂಘಟನಾ ಸಂಚಾಲಕ ಕುಮಾರ, ತೊಟ್ಟವಾಡಿ ರಾಜಪ್ಪ, ಖಜಾಂಚಿ ಕೊಳತೂರು ಪ್ರಭಾಕರ, ಟೌನ್ ಸಂಚಾಲಕ ಎಸ್. ಗಿರೀಶ್, ಮುಖಂಡರಾದ ಮನೋಜ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು