News Karnataka Kannada
Friday, May 17 2024
ಮೈಸೂರು

ಯುವಕರು ದೇಶಪ್ರೇಮ ರೂಢಿಸಿಕೊಳ್ಳಬೇಕು: ಎಂ.ಜಿ  ಮಹೇಶ್

Photo Credit :

ಮೈಸೂರು: ಯುವಕರು ತ್ಯಾಗ ಬಲಿದಾನದೊಂದಿಗೆ ದೇಶಪ್ರೇಮದ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ  ಮಹೇಶ್ ಹೇಳಿದರು.

ಭಾರತೀಯ ಭೂಸೇನಾ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ  ನಡೆದ ಜೈಹಿಂದ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಅಲ್ಲಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ಹೋರಾಟಗಳು ಸಾಂಕೇತಿಕವಾಗಿ    ನಡೆಯುತ್ತಿದ್ದಕ್ಕೆ ಕ್ರಾಂತಿಕಾರಿ  ಸ್ವರೂಪ  ಸಂಘಟನಾತ್ಮಕವಾಗಿ  ಬಲಿಷ್ಠವಾಗಲು ಯುವಕರೇ ರಕ್ತವನ್ನ ಕೊಡಿ  ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಕರೆ ನೀಡಿ ಮನೆಗೊಬ್ಬರಂತೆ ಯುವಕರನ್ನ ಸೇನಾನಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ತಾಯಾರಿ ಮಾಡಿ ಭಾರತೀಯ ಭೂಸೇನಾ ನಿರ್ಮಿಸಿದವರೇ ನಮ್ಮ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು. ಅವರ ಐ.ಎ.ಎಸ್ ಪಡೆದರೂ ಸಹ  ಬ್ರಿಟೀಷರ ಗುಲಾಮಗಿರಿ ಆಡಳಿತದಲ್ಲಿ ಕೆಲಸ ಮಾಡಲು ಮನವೊಪ್ಪದ ಕಾರಣ ತ್ಯಜಿಸಿದರು, ಇವತ್ತಿನ ಭಾರತದಲ್ಲಿ ನಾವುಗಳು ಸುರಕ್ಷಿತವಾಗಿದ್ದೇವೆ ಎಂದರೆ‌ ಅದಕ್ಕೆ ನೇತಾಜಿ ರವರು ನಿರ್ಮಿಸಿರುವ ಭಾರತೀಯ ಭೂಸೇನೆ ಸೈನಿಕರು ಕಾರಣ ಎಂದರು

ಬಿಜೆಪಿ ಮೈಸೂರು ವಕ್ತಾರ ಮಾ.ಮೋಹನ್ ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನ ನರೇಂದ್ರ ಮೋದಿ ರವರು ಪ್ರಧಾನಮಂತ್ರಿ ಯಾದ ಬಳಿಕ  ಪರಾಕ್ರಮ ದಿವಸ್ ಎಂದು ಕೇಂದ್ರ ಸರ್ಕಾರದಿಂದ ಆಚರಿಸಲು ಕ್ರಮಕೈಗೊಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು 125ನೇ ಜಯಂತಿಯ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ವರ್ಷಪೂರ್ತಿ ಆಚರಿಸಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ  ನಾರಾಯಣ ಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ, ನಗರಪಾಲಿಕೆ ಪಾಲಿಕೆ ಸದಸ್ಯರಾದ ಎಲ್  ಜಗದೀಶ್, ಅಜಯ್ ಶಾಸ್ತ್ರಿ,  ರಾಕೇಶ್ ಭಟ್, ಟಿ ಎಸ್ ಅರುಣ್, ರಾಷ್ಟ್ರೀಯ ಹಿಂದೂ ಸಮಿತಿಯ ವಿಕಾಸ್ ಶಾಸ್ತ್ರಿ, ತೇಜಸ್, ಗಗನ್, ಪ್ರದೀಪ್, ಚಿದಂಬರಂ, ಸುಚೀಂದ್ರ, ಕಿರಣ್, ಮಹೇಂದ್ರ ಎಂ ಶೈವ, ವಿದ್ಯಾ, ವರಲಕ್ಷ್ಮಿ ಅಜಯ್, ಸುವರ್ಣ, ವಿನಯ್ ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು