ಮೈಸೂರು: ಸಾಲ ಬಾಧೆ ತಾಳಲಾರದೆ ರೈತನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಗಳಿ ಗ್ರಾಮದಲ್ಲಿ ನಡೆದಿದೆ.
ಮಾಗಳಿ ಗ್ರಾಮದ ನಿವಾಸಿ ಕೃಷ್ಣ(52) ಮೃತಪಟ್ಟ ರೈತ. ಇವರು ತಮ್ಮ ಜಮೀನಿನಲ್ಲಿ ಜೋಳ ಶುಂಠಿ ಹಾಗೂ ಹೂ ಬೆಳೆಯಲು ಪಿಎಸಿಸಿಎಸ್ ಮುತ್ತೂರು ಶಾಖೆಯಲ್ಲಿ 90 ಸಾವಿರ ಫಿನ್ ಕೇರ್ ಫೈನಾನ್ಸ್ ನಲ್ಲಿ 3 ಲಕ್ಷ ಹಾಗೂ ಮಹಿಳಾ ಸಂಘಗಳಿಂದ ಸಾಲ ಮಾಡಿದ್ದರು.
ಬೆಳೆ ವಿಫಲಗೊಂಡು ಸಾಲ ಹೆಚ್ಚಿದ್ದರಿಂದ ಮನನೊಂದು ಮಾಗಳಿ ಗ್ರಾಮದ ಕೆರೆಗೆ ಹಾರಿ ಮೃತಪಟ್ಟಿದ್ದಾರೆ ಎಂದು ಆತನ ಮಗ ಪ್ರೇಮ್ ಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಟ್ಟಣದ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್, ಸಬ್ ಇನ್ಸ್ ಪೆಕ್ಟರ್ ಪುಟ್ಟರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.