ಸರಗೂರು: ಜಮೀನಲ್ಲಿ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಕೊಂಡಿದ್ದ ಸುಮಾರು ನಾಲ್ಕು ವರ್ಷದ ಹೆಣ್ಣು ಚಿರತೆಯೊಂದನ್ನು ರಕ್ಷಿಸಿ ಮರಳಿ ಕಾಡಿಗೆ ಬಿಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಮುಳ್ಳೂರು ಗ್ರಾಮದ ಗ್ರಾಮದ ಹರೀಶ್ ಎಂಬುವವರು ಜಮೀನೊಂದನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರಿಂದ ಅಲ್ಲಿಯೇ ಇದ್ದ ಅವರು ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಹರೀಶ್ ಮನೆಯಿಂದ ಹೊರಬಂದಿದ್ದಾರೆ ಈ ವೇಳೆ ಜೋರಾದ ಶಬ್ದವೊಂದು ಕೇಳಿಸಿದ್ದು ಹತ್ತಿರಕ್ಕೆ ಹೋಗಿ ನೋಡಿದ ಸಂದರ್ಭದಲ್ಲಿ ಚಿರತೆ ತಂತಿಗೆ ಸಿಲುಕಿರುವುದು ಕಂಡಿದೆ.
ಕೂಡಲೇ ಹರೀಶ್ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಯಡಿಯಾಲ ಅರಣ್ಯ ಉಪ ವಿಭಾಗದ ಎಸಿಎಫ್ ರವಿಕುಮಾರ್ ನೇತೃತ್ವದ ಇಲಾಖೆಯ ಪಶುವೈದ್ಯಾಧಿಕಾರಿ ವಾಸಿಂ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಿ ಬೇಲಿಗೆ ಸಿಲುಕಿದ್ದ ಚಿರತೆಗೆ ಅರವಳಿಕೆ ನೀಡಿ ಬಳಿಕ ಚಿರತೆಯನ್ನು ಬೋನಿಗೆ ಹಾಕುವ ಮೂಲಕ ರಕ್ಷಣೆ ಮಾಡಿದ್ದಾರೆ.
ಚಿರತೆಯ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿರತೆಯನ್ನು ಯಡಿಯಾಲ ಅರಣ್ಯ ವಲಯ ಕಚೇರಿಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಚಿರತೆ ಸುಧಾರಿಸಿದ್ದು, ತದನಂತರ ಚಿರತೆಯನ್ನು ಯಡಿಯಾಲ ಮತ್ತು ಮೂಲೆಹೊಳೆ ಸಮೀಪದ ಕಾಡಿನ ಒಳಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ
ತಾಲ್ಲೂಕಿನ ಮುಳ್ಳೂರು ಗ್ರಾಮದ ಗ್ರಾಮದ ಹರೀಶ್ ಎಂಬುವವರು ಜಮೀನೊಂದನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರಿಂದ ಅಲ್ಲಿಯೇ ಇದ್ದ ಅವರು ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಹರೀಶ್ ಮನೆಯಿಂದ ಹೊರಬಂದಿದ್ದಾರೆ ಈ ವೇಳೆ ಜೋರಾದ ಶಬ್ದವೊಂದು ಕೇಳಿಸಿದ್ದು ಹತ್ತಿರಕ್ಕೆ ಹೋಗಿ ನೋಡಿದ ಸಂದರ್ಭದಲ್ಲಿ ಚಿರತೆ ತಂತಿಗೆ ಸಿಲುಕಿರುವುದು ಕಂಡಿದೆ.
ಕೂಡಲೇ ಹರೀಶ್ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಯಡಿಯಾಲ ಅರಣ್ಯ ಉಪ ವಿಭಾಗದ ಎಸಿಎಫ್ ರವಿಕುಮಾರ್ ನೇತೃತ್ವದ ಇಲಾಖೆಯ ಪಶುವೈದ್ಯಾಧಿಕಾರಿ ವಾಸಿಂ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಿ ಬೇಲಿಗೆ ಸಿಲುಕಿದ್ದ ಚಿರತೆಗೆ ಅರವಳಿಕೆ ನೀಡಿ ಬಳಿಕ ಚಿರತೆಯನ್ನು ಬೋನಿಗೆ ಹಾಕುವ ಮೂಲಕ ರಕ್ಷಣೆ ಮಾಡಿದ್ದಾರೆ.
ಚಿರತೆಯ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿರತೆಯನ್ನು ಯಡಿಯಾಲ ಅರಣ್ಯ ವಲಯ ಕಚೇರಿಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಚಿರತೆ ಸುಧಾರಿಸಿದ್ದು, ತದನಂತರ ಚಿರತೆಯನ್ನು ಯಡಿಯಾಲ ಮತ್ತು ಮೂಲೆಹೊಳೆ ಸಮೀಪದ ಕಾಡಿನ ಒಳಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ