News Karnataka Kannada
Thursday, May 02 2024
ಮೈಸೂರು

ಮೈಸೂರು: ಅಪ್ಪು ನೆನೆದು ಭಾವುಕರಾದ ನಟಿ ಪೂಜಾ ಚೋಪ್ರಾ

Actress Pooja Chopra gets emotional as she remembers Appu
Photo Credit : By Author

ಮೈಸೂರು: ನಮ್ಮನ್ನು ಅಗಲಿದ ಮೇರು ನಟ ಪುನೀತ್ ರಾಜ್ ಕುಮಾರ್ (ಅಪ್ಪು) ನೆನೆದು ಬಾಲಿವುಡ್ ನಟಿ ಪೂಜಾ ಚೋಪ್ರಾ ಭಾವುಕರಾದರು.

ಮೈಸೂರಿನ ಸುಜೀವ್ ಫೌಂಡೇಶನ್ ವತಿಯಿಂದ  ಹಿಂದೂ ಮುಸ್ಲಿಂ ಬಾಂಧವರು  ಸೇರಿ ವಿಜಯನಗರದ ಎರಡನೇ ಹಂತದ ಸುಜೀವ್ ಫೌಂಡೇಶನ್ ಕಚೇರಿಯಲ್ಲಿ ಆಚರಿಸಿದ ಗೌರಿಗಣೇಶ ಹಬ್ಬದಲ್ಲಿ ಪಾಲ್ಗೊಂಡು ನಟ ದಿ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಇದೇ ವೇಳೆ ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದರು. ಕನ್ನಡ ಅಂದರೆ ನನಗೆ ಅಚ್ಚುಮೆಚ್ಚು ಅದರಲ್ಲೂ ಮೈಸೂರು ಎಂದರೆ ತುಂಬಾನೇ ಇಷ್ಟ. ಮೈಸೂರು ಅರಮನೆ ಸೇರಿದಂತೆ ಇನ್ನಿತರ ಸ್ಥಳಗಳ ಮೈಸೂರಿನಲ್ಲಿ ಬಹಳ ಜನಪ್ರಿಯವಾಗಿರುವುದು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಕರ್ನಾಟಕದಲ್ಲಿ ಅದು ಮೈಸೂರಿನಲ್ಲೇ ಇರಲು ಇಷ್ಟ ಪಡುತ್ತೇನೆ ಎಂದು ಹೇಳಿದರು.

ರಾಜ್ಯಾದ್ಯಂತ ನಾನು ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಜಾನ್ ಚಾರ್ ಯಾರ್ ಎಂಬ ಹಿಂದಿ ಚಿತ್ರ ಬಿಡುಗಡೆಯಾಗಲಿದೆ ಮಹಿಳೆಯರು ಧೈರ್ಯವಾಗಿ ಜೀವನ ನಡೆಸುವುದು ಮತ್ತು ಸಬಲೀಕರಣ  ಬಗ್ಗೆ ಮಾಹಿತಿಯುಳ್ಳ ಚಿತ್ರವಾಗಿದ್ದು ದಯಮಾಡಿ ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಪೌರಕಾರ್ಮಿಕರಿಗೆ ಬಾಗಿನ ಹಾಗೂ ಮುಸ್ಲಿಂ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.

ಸುಜೀವ್ ಫೌಂಡೇಶನ್ ಅಧ್ಯಕ್ಷ ರಾಜರಾಂ, ಮುಸಲ್ಮಾನ್ ಧರ್ಮಗುರು ಮೊಹಮ್ಮದ್ ಯೂಸಫ್, ಸುಜೀವ್ ಕಾಂಗ್ರೆಸ್ ಮುಖಂಡರಾದ ಎನ್.ಎಂ.ನವೀನ್ ಕುಮಾರ್, ವಿನಯ್ ಕಣಗಾಲ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿನಯ್ ಕಣಗಾಲ್, ರಾಜೇಶ್, ಸುನಿಲ್ ನಾರಾಯಣ್  ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು