ಕಲ್ಲೇರಿ: ಪುಂಜಾಲಕಟ್ಟೆ ಮೇಲಿನ ಪೇಟೆಯ ಶಾರದಾ ಮಂಟಪದ ಬಳಿ ಸೋಮವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯನ್ನು ಆಸ್ಪತ್ರೆಗೆ ನೋಡಲು ಬರುತ್ತಿದ್ದಾಗ ಟಿಪ್ಪರ್ ರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತ ಪಟ್ಟಿದ್ದಾರೆ.
ಕಕ್ಕೆಪದವು ನಿವಾಸಿ ತುಂಬೆಯ ಐಟಿಐ ವಿದ್ಯಾರ್ಥಿ ಮಹಮ್ಮದ್ ಸಫಾನ್(20) ಎಂಬವರೇ ಸಾವನ್ನಪ್ಪಿದವರು.
ಪುಂಜಾಲಕಟ್ಟೆಯಲ್ಲಿ ಬೈಕ್ – ಬೈಕ್ ನಡುವೆ ಅಪಘಾತ ನಡೆದು ಕಾಲೇಜ್ ವಿದ್ಯಾರ್ಥಿ ಕರಾಯದ ಮಹಮ್ಮದ್ ಶಫೀಕ್(20) ಸಾವನ್ನಪ್ಪಿದ್ದು ಈ ವಿಚಾರ ತಿಳಿದು ಸಂಬಂಧಿ ಕಕ್ಕೆಪದವು ನಿವಾಸಿ ತುಂಬೆಯ ಐ.ಟಿ.ಐ. ವಿದ್ಯಾರ್ಥಿ ಮಹಮ್ಮದ್ ಸಫಾನ್(20) ಬೈಕ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿದ್ದ ಸವಾರ ಮಹಮ್ಮದ್ ಸಫಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಡಿಕ್ಕಿ ಹೊಡೆದು ಟಿಪ್ಪರ್ ವಾಹನ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.