News Karnataka Kannada
Monday, May 06 2024
ಮಂಡ್ಯ

ಸಕಾಲಸೇವೆಯಡಿ  ಕಾಲ ಮಿತಿಯೊಳಗೆ ಸೇವೆ ಒದಗಿಸದಿದ್ದರೆ  ದಂಡ

Sakala
Photo Credit :

ಮಂಡ್ಯ: ಜಿಲ್ಲೆಯಲ್ಲಿ  ಸಕಾಲದ ಅನುಷ್ಠಾನ ಬಹಳ  ವ್ಯವಸ್ಥಿತವಾಗಿ ನಡೆಯುತ್ತಿದ್ದು, ಎಲ್ಲ ಅಧಿಕಾರಿಗಳು  ಸಕಾಲ ಕಾಯ್ದೆ  ನಿಗಧಿ ಪಡಿಸಿರುವ  ಕಾಲಮಿತಿಯೊಳಗೆ  ಸೇವೆಯನ್ನು  ನೀಡದಿದ್ದರೆ  ದಂಡ ವಿಧಿಸಲಾಗುವುದು   ಎಂದು  ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಆಯೋಜಿಸಲಾಗಿದ್ದ, ಸಕಾಲ ಜಾಥಾಗೆ  ಚಾಲನೆ ನೀಡಿ ಅವರು ಮಾತನಾಡಿ, ಸಕಾಲ ಯೋಜನೆ ದಶಮಾನೋತ್ಸವ  ಆಚರಿಸುವ ಸಂಭ್ರಮದ ಅಂಗವಾಗಿ  ಸಕಾಲದ  ಸೇವೆಯ ಬಗ್ಗೆ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು   ಜಾಥಾ ಆಯೋಜಿಸಿದ್ದು, ನಾಗರಿಕರು ಸಕಾಲ ಯೋಜನೆಯ  ಬಗ್ಗೆ ತಿಳಿದುಕೊಂಡು ಸದುಪಯೋಗ

ಕಂದಾಯ ಇಲಾಖೆಯಲ್ಲಿ ಆಟಲ್ ಜನಸ್ನೇಹಿ  ಕೇಂದ್ರದ  48 ಸೇವೆಗಳು, ಭೂಮಿ ಮತ್ತು ಇತರೆ ಕಂದಾಯ ಇಲಾಖೆಯ ಒಟ್ಟು 52 ಸೇವೆಗಳು ಸೇರಿದಂತೆ ಎಲ್ಲಾ ಇಲಾಖೆಗಳ ಒಟ್ಟು 1115 ಸೇವೆಗಳನ್ನು ಸಕಾಲದಡಿಯಲ್ಲಿ  ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಸಕಾಲ ಕಾಯ್ದೆಯನ್ನು ಜಾರಿಗೆ ತಂದು  ಕಾಲಮಿತಿಯೊಳಗೆ  ಸಾರ್ವಜನಿಕರಿಗೆ ಸೇವೆಯನ್ನು  ಒದಗಿಸುತ್ತಿದೆ.  ಜಿಲ್ಲೆಯಲ್ಲಿ ಸಕಾಲ ಕಾಯ್ದೆಯನ್ನು ಪರಿಣಾಮಕಾರಿಯಾಗಿ  ಅನುಷ್ಠಾನ  ಮಾಡಲಾಗುತ್ತಿದೆ.  ಸಕಾಲದಲ್ಲಿ  ಕಳೆದ ಎರಡು ವರ್ಷಗಳಲ್ಲಿ  ಮಂಡ್ಯ  ಜಿಲ್ಲೆ  ಇಡೀ ರಾಜ್ಯದಲ್ಲಿ  ಏಳು  ಬಾರಿ  ಮೊದಲ  ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು 8ನೇ  ಸ್ಥಾನದಲ್ಲಿದ್ದು   ಮೊದಲ ಸ್ಥಾನ ಪಡೆದುಕೊಳ್ಳಲು  ಪ್ರಯತ್ನಿಸಲಾಗುತ್ತಿದೆ ಎಂದರು.

ಕಂದಾಯ ಇಲಾಖೆ, ಪಂಚಾಯತ್  ರಾಜ್, ಹಿಂದುಳಿದ  ವರ್ಗಗಳು, ಕೆ.ಎಸ್.ಆರ್.ಟಿ. ಸಿ, ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ   ಎಲ್ಲಾ  ನಿಗಮ ಮಂಡಳಿಗಳು ನೀಡುವ ಸೇವೆಯನ್ನು  ಸಕಾಲದಡಿ ತರಲಾಗಿದೆ. ಎಲ್ಲಾ  ಸರ್ಕಾರಿ ಕಚೇರಿಯ ಸಿಬ್ಬಂದಿ  ಮತ್ತು  ಅಧಿಕಾರಿಗಳು  ಸಹ ಜಾಗೃತರಾಗಿ ಸಕಾಲ ಸೇವೆಯನ್ನು  ಕೊಡುವಲ್ಲಿ   ಗುಣಾತ್ಮಕ  ಕೆಲಸವನ್ನು  ಮಾಡಬೇಕು ಎಂದರು.

ಇದೇ ವೇಳೆ ಜಾಥಾ ಜಿಲ್ಲಾಧಿಕಾರಿಗಳ ಕಚೇರಿಯಿಂದ  ಹೊರಟು ಎಂ.ಸಿ ರಸ್ತೆಯ  ಮೂಲಕ  ತಹಶೀಲ್ದಾರ್  ಕಚೇರಿಗೆ ತಲುಪಿತು.  ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಸೌಮ್ಯ  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು