ಮಂಡ್ಯ: ಗಂಡ-ಹೆಂಡತಿ ಜಗಳದ ಮನಸ್ತಾಪದಿಂದಾಗಿ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಮಲ್ಲಯ್ಯನಗರದಿಂದ ವರದಿಯಾಗಿದೆ. ಗ್ರಾಮದ ವಿಶ್ವೇಶ್ವರಯ್ಯ ಮಹೇಶ ಕರವೀಮಠ ಅವರ ಪತ್ನಿ ಸ್ನೇಹಾ (23) ಎಂಬಾಕೆಯೇ ನಾಪತ್ತೆಯಾಗಿರುವ ಗೃಹಿಣಿಯಾಗಿದ್ದಾರೆ.
ಈಕೆ ಕಳೆದ ಸೆ. 25ರಂದು 8.45ರ ಸಮಯದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾಳೆ. ಪತಿ ಕೆಲಸಕ್ಕೆ ಹೋಗಿ ಸಂಜೆ 6 ಗಂಟೆಗೆ ಮನೆಗೆ ಬಂದು ನೋಡಲಾಗಿ ಪತ್ನಿ ಇಲ್ಲದಿದ್ದನ್ನು ಕಂಡು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಕುತ್ತಿಗೆಯಲ್ಲಿ ಕಪ್ಪು ಕಾರೆಹರಳು ಇರುತ್ತೆ. ಕಪ್ಪು ಕೂದಲು, ಎತ್ತರ ಸುಮಾರು 4.3 ಅಡಿ ಎತ್ತರ, ಮನೆಯಿಂದ ಹೋದಾಗ ಕೆಂಪು ಬಣ್ಣದ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಶಾಲು ಧರಿಸಿದ್ದಾರೆ. ಈಕೆಯನ್ನು ಕಂಡವರು ತಕ್ಷಣ ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.