ಸುಂಟಿಕೊಪ್ಪ: ಜೋಕಿಮ್ ಮತ್ತು ಅನ್ನಮ್ಮ ಅವರ ಮಗಳಾಗಿ ಜನಿಸಿದ ಯೇಸು ಮಾತೆಯ ಸ್ಮರಣೆಯ ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕೊಡಗಿನ ಹುತ್ತರಿ ಹಬ್ಬ ಆಚರಣೆಯಂತೆ ನೂತನ ಭತ್ತದ ತೆನೆಯನ್ನು ಕೊಯ್ದು ದೇವಾಲಯಕ್ಕೆ ತರುವ ಮೂಲಕ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಮಂಜಿಕೇರೆಯ ಗದ್ದೆಗೆ ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ವಂ. ಫಾಧರ್ ಅರುಳ್ ಸೇಲ್ವಕುಮಾರ್ ಅವರೊಂದಿಗೆ ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರಿಯರು ಹಾಗೂ ಕ್ರೈಸ್ತ ಬಾಂಧವ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪ್ರಾರ್ಥನೆಯನ್ನು ಸಲ್ಲಿಸಿ ತೆರಳಿದರು.
ನಂತರ ಭತ್ತದ ಗದ್ದೆಯಲ್ಲಿನ ಪೈರಿಗೆ ಪ್ರಾರ್ಥನೆ ಸಲ್ಲಿಸಿ ಆರ್ಶಿವಚಿಸಿ ಭತ್ತದ ಫೈರನ್ನು ಫಾಧರ್ ಅರುಳ್ ಸೇಲ್ವಕುಮಾರ್ ಅವರು ಕೊಯ್ದು ಕ್ರೈಸ್ತ ಭಾಂದವರು ಪ್ರಾರ್ಥನೆಯೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತಂದು ಪೈರನ್ನು ಇಟ್ಟು ದೇವಾಲಯದ ಧರ್ಮಗರುಗಳು ಅರುಳ್ ಸೇಲ್ವಕುಮಾರ್ ಹಾಗೂ ಮೈಸೂರಿನ ಧರ್ಮಗರುಗಳಾದ ಮೈಕಲ್ ಆಗಸ್ಟೀನ್ ಪ್ರೊ ಅವರುಗಳು ವಿಶೇಷ ಪ್ರಾರ್ಥನೆ ಹಾಗೂ ದಿವ್ಯ ಬಲಿಪೂಜೆಯನ್ನು ನೇರವೇರಿಸಿದರು.
ನೂರಾರು ಸಂಖ್ಯೆಯಲ್ಲಿ ನೇರದಿದ್ದ ಭಕ್ತಾಧಿಗಳು ಅಮಲೋದ್ಬವ ಮಾತೆಯ ಆರ್ಶಿವಚನವನ್ನು ಪಡೆದರು. ನಂತರ ಭತ್ತದ ತೆನೆಗಳನ್ನು ಕ್ರೈಸ್ತ ಭಾಂದವರಿಗೆ ಧರ್ಮಗುರುಗಳು ವಿತರಿಸಿದರು. ರಾತ್ರಿ ಬೋಜನವನ್ನು ನೀಡಲಾಯಿತು.