ಕೆದಿಂಜೆ: 8 ವರ್ಷಗಳ ಹಿಂದೆ ತಾಲೂಕಿನ ಕೆದಿಂಜೆ ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿ ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಎರಡು ಮಂದಿಯ ಸಾವಿಗೆ ಕಾರಣನಾದ ಆರೋಪಿಗೆ ಕಾರ್ಕಳದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಶ್ರೀನಿವಾಸ್ ಪೂಜಾರಿ ಶಿಕ್ಷೆಗೆ ಗುರಿಯಾದ ಆರೋಪಿ. 2014ರ ಅಕ್ಟೋಬರ್ 17ರಂದು ಸಂಜೆ 5.45ಕ್ಕೆ ಕೆದಿಂಜೆ ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿ ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಜಮೀಲಾ ಮತ್ತು ನಿಹಾ ಎಂಬವರು ಮೃತಪಟ್ಟಿದ್ದು, 7ಮಂದಿ ಗಾಯಗೊಂಡಿದ್ದರು. ಅಂದಿನ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಿ ಎಂ ನಾಯ್ಕ ಕೋರ್ಟ್ ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಾರ್ಕಳದ ನ್ಯಾಯಾಧೀಶ ಚೇತನಾ ಸಿ.ಎಫ್ ಅವರು ಆರೋಪಿಗೆ 6 ತಿಂಗಳ ಸಾಧಾರಣ ಸಜೆ ಮತ್ತು 5000 ದಂಡ ವಿಧಿಸಿ ತೀರ್ಪು ನೀಡಿದ್ಧಾರೆ., ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಸಭಿಯೋಜಕ ರಾಜಶೇಖರ್ ಪಿ ಶಾಮರಾವ್ ವಾದ ಮಂಡಿಸಿದ್ದರು.