News Karnataka Kannada
Monday, May 06 2024
ಮಡಿಕೇರಿ

ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯನವರ ನೂತನ ಪ್ರತಿಮೆ ಮರು ಸ್ಥಾಪನೆ  

ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ. ಎಸ್ ತಿಮ್ಮಯ್ಯ ನವರ ನೂತನ ಪ್ರತಿಮೆಯನ್ನು ಇಂದು ಸಕಲ ಗೌರವದೊಂದಿಗೆ ಮಡಿಕೇರಿಯಲ್ಲಿ ಮರು ಸ್ಥಾಪಿಸಲಾಯಿತು.
Photo Credit : By Author

ಮಡಿಕೇರಿ: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ. ಎಸ್ ತಿಮ್ಮಯ್ಯ ನವರ ನೂತನ ಪ್ರತಿಮೆಯನ್ನು ಇಂದು ಸಕಲ ಗೌರವದೊಂದಿಗೆ ಮಡಿಕೇರಿಯಲ್ಲಿ ಮರು ಸ್ಥಾಪಿಸಲಾಯಿತು.

ಜಿಲ್ಲಾಡಳಿತ, ನಗರಸಭೆ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ನೂತನ ವೃತ್ತದಲ್ಲಿ ಪ್ರತಿಮೆಯನ್ನು ಮರು ಸ್ಥಾಪಿಸಲಾಯಿತು. ಏರ್ ಮಾರ್ಷಲ್ ನಂದ ಕಾರ್ಯಪ್ಪ ನವರು ಪುಷ್ಪಾ ನಮನದ ಮೂಲಕ ಅನಾವರಣಗೊಳಿಸಿದರು. ಇದೇ ಸಂದರ್ಭ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು.

ಮೈಸೂರಿನಲ್ಲಿ ಸಜ್ಜುಗೊಂಡು ಶುಕ್ರವಾರ ಬೆಳಿಗ್ಗೆ ಮಡಿಕೇರಿಗೆ 11:30 ಗಂಟೆಗೆ ವಾಹನದಲ್ಲಿ ಆಗಮಿಸಿದ ಜನರಲ್  ತಿಮ್ಮಯ್ಯನವರ ಪ್ರತಿಮೆಯನ್ನು ಶಾಸಕರುಗಳಾದಿಯಾಗಿ ಸ್ವಾಗತಿಸಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಹಲವರು ಆಗಮಿಸಿ ಗೌರವ ನಮನವನ್ನು ಸಲ್ಲಿಸಿದರು. ಮಾಜಿ ಸೈನಿಕರು ಮೆರವಣಿಗೆ ಮೂಲಕ ಸಾಗಿ ಬಂದರು, ಬೈಕ್ ಜಾತ ಕೂಡ ಈ ಸಂದರ್ಭ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಎ.ಎಸ್ ಪೊನ್ನಣ್ಣ ಮಂತರ್,, ಗೌಡ, ಮಾಜಿ ಸಚಿವರಾದ ಎಂ. ಸಿ ನಾಣ್ಣಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಜಿಲ್ಲಾಧಿಕಾರಿಗಳಾದ ವೆಂಕಟರಾಜ್,ಮಾಜಿ ಶಾಸಕ ಕೆಜಿ.ಬೋಪಯ್ಯ ವಿದಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜನರಲ್ ತಿಮ್ಮಯ್ಯ ಫೋರಂ ನ ಅಧ್ಯಕ್ಷರಾದ ಕರ್ನಲ್ ಕೆ. ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಿ.ಎ ಕಾರ್ಯಪ್ಪ, ಮುಂತಾದವರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು