ಮಡಿಕೇರಿ, ಆ.11: ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ನಗರದ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ವರ್ತಕರು ದೇಶಭಕ್ತಿಯನ್ನು ಮೆರೆಯಬೇಕೆಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ ಮನವಿ ಮಾಡಿದ್ದಾರೆ.
ಆ.13, 14 ಮತ್ತು 15 ರಂದು ಮೂರು ದಿನ ಧ್ವಜವನ್ನು ಹಾರಿಸುವ ಮೂಲಕ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಭಾಗಿಗಳಾಗಬೇಕೆಂದು ತಿಳಿಸಿರುವ ಅವರು, ತ್ರಿವರ್ಣ ಧ್ವಜಕ್ಕೆ ಅಗೌರವವಾಗದಂತೆ ಎಚ್ಚರ ವಹಿಸಬೇಕೆಂದು ಕೋರಿದ್ದಾರೆ.