News Karnataka Kannada
Monday, May 13 2024
ಮಡಿಕೇರಿ

ಮಡಿಕೇರಿ: ಅರುವತ್ತೊಕ್ಲು ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟ

Madikeri: Mud field sports meet at Aruvathoklu village
Photo Credit : By Author

ಮಡಿಕೇರಿ: ತಾಲ್ಲೂಕಿನ ಅರುವತ್ತೊಕ್ಲು ಗ್ರಾಮದ ಬೇಕೋಟು ಮಕ್ಕ ಯೂತ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಅರುವತೊಕ್ಲು ಗ್ರಾಮದ ತಳೂರು.ಎಂ.ಚಂಗಪ್ಪ ಹಾಗೂ ತಳೂರು.ಎಂ.ಕುಶಾಲಪ್ಪ ಅವರ ಭತ್ತದ ಗದ್ದೆಯಲ್ಲಿ ಎರಡನೇ ಅದ್ದೂರಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.

ಈ ಕ್ರೀಡಾಕೂಟಕ್ಕೆ ಅಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸಾಕ್ಷಿಯಾದರು. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಗ್ರಾಮದ ಹಿರಿಯರು ಹಾಗೂ ಗ್ರಾಮದ ಹಿತಚಿಂತಕರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಉದ್ಘಾಟನೆಯು ಕ್ಲಬ್‌ನ ಸದಸ್ಯ ಕ್ರೀಡಾಪಟುಗಳು ನಾಲ್ಕು ದಿಕ್ಕುಗಳಿಂದ ಕ್ರೀಡಾ ಜ್ಯೋತಿಯನ್ನು ಹೊತ್ತು ತರುವ ಮೂಲಕ, ನೆರೆದಿದ್ದ ಕ್ರೀಡಾಪಟುಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಕ್ರೀಡಾಕೂಟವನ್ನು ಪ್ರಾರಂಭಿಸಿದರು.

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟ, ಪುರು?ರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗ ಜಗ್ಗಾಟ, ಪುರು?ರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಯೋಮಾನದ ಆಧಾರದಲ್ಲಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ಕ್ರೀಡಾಕೂಟದಲ್ಲಿ ವಿವಿಧ ಸ್ಥಳಗಳಿಂದ 16 ಪುರುಷರ ಕ್ರಿಕೆಟ್ ತಂಡಗಳು, 12 ಪುರುಷರ ಹಗ್ಗ ಜಗ್ಗಾಟ ತಂಡಗಳು, 8 ಮಹಿಳೆಯರ ಹಗ್ಗ ಜಗ್ಗಾಟ ತಂಡಗಳು ಹಾಗೂ ಎಲ್ಲಾ ವಯೋಮಾನದ ನೂರಾರು ಓಟಗಾರರು ಓಟಗಾರ್ತಿಯರು ಉತ್ಸಾಹದಿಂದ ಭಾಗವಹಿಸಿದ್ದರು.

ಗ್ರಾಮದ ಬೆಳೆಗಾರರು ಹಾಗೂ ಹಿತಚಿಂತಕರುಗಳಾದ ಚೆರುಮಾಡಂಡ ಸತೀಶ್ ಸೋಮಣ್ಣ ಬ್ಯಾಟಿಂಗ್ ಹಾಗೂ ಗ್ರಾಮದ ಮಾಜಿ ಸೈನಿಕರು ಹಾಗೂ ಹಿತಚಿಂತಕರಾದ ತಳೂರು ಕೇಶವರವರು ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಕ್ರೀಡಾಭಿಮಾನಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಂಗಳೂರಿನ 93.5 ಎಫ್‌ಎಂ. ರೇಡಿಯೋ ಜಾಕಿ ಆರ್.ಜೆ. ತ್ರಿಶೂಲ್, ಗ್ರಾಮದ ಅಧ್ಯಾಪಕಿ ತಳೂರು ಉಷಾ ಕಾಶಿ ಹಾಗೂ ಗ್ರಾಮದ ಶಿಕ್ಷಕಿ ತಳೂರು ಕುಸುಮ ದಿನೇಶ್ ಇವರುಗಳ ನಿರೂಪಣೆ ಹಾಗೂ ವೀಕ್ಷಕ ವಿವರಣೆ ಈ ಕ್ರೀಡಾಕೂಟದಲ್ಲಿ  ನೆರೆದಿದ್ದ ಜನಸ್ತೋಮವನ್ನು ರಂಜಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷರಾದ ಸೂರಿ ಕಾಕೇರಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಆಗಮಿಸಿದ್ದರು.

ವಿಶೇಷ ಅತಿಥಿಗಳಾಗಿ ಮಕ್ಕಳ ತಜ್ಞ ಹಾಗೂ ಸಾಹಿತಿ ಮೇಜರ್.ಡಾ.ಕುಶ್ವಂತ್ ಕೋಳಿಬೈಲು, ಬೆಟ್ಟಗೇರಿ ಪಂಚಾಯಿತಿ ಅಧ್ಯಕ್ಷರಾದ ನಾಪಂಡ. ರಾಲಿ ಮಾದಯ್ಯ, ಬೆಟ್ಟಗೇರಿ ವಿ.ಎಸ್.ಎಸ್.ಎನ್‌ನ ಅಧ್ಯಕ್ಷರಾದ ತಳೂರು.ಎ.ಕಿಶೋರ್ ಕುಮಾರ್, ಬೆಟ್ಟಗೇರಿ ಗ್ರಾ.ಪಂ. ಸದಸ್ಯರಾದ ತಳೂರು ದಿನೇಶ್ ಕರುಂಬಯ್ಯ, ಬೆಟ್ಟಗೇರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ತಳೂರು ಶಾಂತಿ ಸೋಮಣ್ಣ, ಗ್ರಾಮದ ನಿವೃತ್ತ ಯೋಧ ಜಬ್ಬಂಡ ಕುಟ್ಟಪ್ಪ, ಸ್ಥಳದಾನಿಗಳಾದ ತಳೂರು.ಎಂ.ಚಂಗಪ್ಪ, ತಳೂರು.ಎಂ.ಕುಶಾಲಪ್ಪ ಅವರು ಆಗಮಿಸಿ ಕ್ರೀಡಾಕೂಟಕ್ಕೆ ಮೆರಗು ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು